Saturday, August 12, 2023

 ಒಂದು ಸಲ ಸರ್ ಎಂ. ವಿಶ್ವೇಶ್ವರಯ್ಯ ಗಾಂಧೀಜಿಯವರನ್ನು ಭೇಟಿ ಮಾಡಿದರು. ಅವರಿಗಾಗಿ ತೋರಿಸಿದ ಕುರ್ಚಿಯ ಮೇಲೆ ಕುಳಿತರು. ಗಾಂಧೀಜಿ ನಕ್ಕರು. ಎಂ.ವಿ. ನಗುವಿಗೆ ಕಾರಣ ಕೇಳಿದರು. ಗಾಂಧಿ ಉತ್ತರಿಸಿದರು:

"ನೀವು ಸೂಟ್ ಹಾಕಿದ್ದೀರಿ. ಕೈಯಲ್ಲಿ ಚಿನ್ನದ ಹಿಡಿಯಿರುವ ಬೆತ್ತ ಹಿಡಿದಿದ್ದೀರಿ. ಜೇಬಲ್ಲಿ ಚಿನ್ನದ ವಾಚ್ ಇಟ್ಕೊಂಡಿದ್ದೀರಿ. ಅದಕ್ಕೇ ನಿಮಗೆ ನೆಲದ ಮೇಲೆ ಕೂರಲಾಗುವುದಿಲ್ಲ. ನಾನು ಈ ದೇಶದ ಬಡವರಲ್ಲೊಬ್ಬ. ನನಗೆ ಹಾಕಲು ಒಂದೇ ಜೊತೆ ಬಟ್ಟೆಯಿದೆ. ಕೂರಲೂ ಕುರ್ಚಿಯಿಲ್ಲ. ಅದಕ್ಕೇ ನೆಲದ ಮೇಲೆ ಕೂರುತ್ತೇನೆ".

ಸರ್ ಎಂ. ವಿ. ಉತ್ತರಿಸಿದರು:

"ಮಹಾತ್ಮಾ, ನಾನೊಬ್ಬ ಬಡ ಪುರೋಹಿತರ ಮಗ. ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಬೆಳೆದವನು. ಒಮ್ಮೆ ಇಂಗ್ಲಿಷ್ ಅಧಿಕಾರಿಯೊಬ್ಬರು ಕುದುರೆಗಾಡಿಯ ಮೇಲೆ ಕೂತು ಕೈಯಲ್ಲಿ ಚಿನ್ನದ ಹಿಡಿಯಿದ್ದ ಬೆತ್ತ ಹಿಡಿದು ಬರುತ್ತಿದ್ದುದನ್ನು, ಜನರೆಲ್ಲಾ ಆತನನ್ನು ಕಣ್ಣು ಬಾಯಿ ಬಿಟ್ಟುಕೊಂಡು ಬೆರಗಾಗಿ ನೋಡುತ್ತಿದ್ದುದನ್ನು ಕಂಡೆ. ಆ ಕ್ಷಣವೇ ನಾನು ಅವರಿಗಿಂತ ಮೇಲೇರಬೇಕು ಅಂತ ನಿರ್ಧರಿಸಿದೆ. ಕಷ್ಟಪಟ್ಟು ಓದಿದೆ, ಈ ಸ್ಥಾನಕ್ಕೆ ಏರಿದೆ. 

ನಮ್ಮ ದೇಶದ ಜನ ನಿಮ್ಮ ತರ ಯೋಚಿಸಿದರೆ, ಭವಿಷ್ಯದಲ್ಲಿ ನಾವೆಲ್ಲ ನೆಲದ ಮೇಲೆ ಕುಳಿತಿರಬೇಕಾಗುತ್ತೆ. ಬೇರೆಯವರು ನಮ್ಮನ್ನ ಆಳುವಂತಾಗುತ್ತದೆ!"

 (ಅನುವಾದ)

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು