Saturday, March 14, 2026

 ಕಥೆ-1061

ದ್ವೀಪದ ಆಕರ್ಷಣೆ


ಒಂದು ಹಡಗಿನಲ್ಲಿ ನೂರಾರು ಜನರು ಕುಳಿತು ಸಾಗರದಲ್ಲಿ ಪ್ರಯಾಣ ಮಾಡುತ್ತಿದ್ದರು. ಮಧ್ಯದಲ್ಲಿ ಒಂದು ಸುಂದರವಾದ ನಡುಗಡ್ಡೆ ಬಂದಾಗ ಎಲ್ಲರೂ ನೋಡಲೆಂದು ಅಲ್ಲಿಗೆ ಹೋದರು. ಆ ನಡುಗಡ್ಡೆಯಲ್ಲಿ ಎಲ್ಲಿ ನೋಡಿದಲ್ಲಿ ಮುತ್ತು ರತ್ನಗಳು ರಾಶಿ ರಾಶಿಯಾಗಿ ಬಿದ್ದಿದ್ದವು.


ಆ ಹಡಗಿನ ಯಜಮಾನ ಮೊದಲೇ ಹೇಳಿದ್ದೇನೆಂದರೆ-"ಆ ನಡುಗಡ್ಡೆಯಲ್ಲಿರುವುದನ್ನೆಲ್ಲ ನೋಡಿ ಸುಮ್ಮನೆ ಬರಿಗೈಯಿಂದ ಬರಬೇಕು. ಏನನ್ನೂ ನೀವು ತರಬಾರದು. ಹೊತ್ತು ಮುಳುಗುವುದರೊಳಗಾಗಿ ಹಡಗಿನಲ್ಲಿ ಮತ್ತೆ ಸೇರಬೇಕು."


ಅದೇ ಪ್ರಕಾರ ಎಲ್ಲರೂ ಸ್ವರ್ಗ ಸದೃಶ್ಯವಾದ ಆ ನಡುಗಡ್ಡೆಯ ವೈಭವವನ್ನೆಲ್ಲ ನೋಡಿ ಸಂತಸದಿಂದ ಬಂದು ಸರಿಯಾದ ಸಮಯಕ್ಕೆ ಹಡಗನ್ನೇರಿ ಕುಳಿತುಕೊಂಡರು. ಒಬ್ಬ ಜಿಪುಣ ಮಹಾಶಯ ಮಾತ್ರ ಇಂಥಾ ವೈಭವ ಸಿರಿಸಂಪತ್ತು ಇನ್ನೆಲ್ಲಿ ಸಿಗುತ್ತದೆಂದು ಅಲ್ಲಿಯೇ ಉಳಿದುಬಿಟ್ಟ. ಇತ್ತ ಆತ ಕುಳಿತು ಬಂದಿದ್ದ ಹಡಗು ಹೊರಟು ಹೋಯಿತು. ಆ ಬಳಿಕ ಅನ್ನ, ನೀರು ಏನೂ ಇಲ್ಲದೆ ಆ ಮನುಷ್ಯ ಅಲ್ಲೇ ಅಸುನೀಗಿದ! ಮುಂದಿನ ವರುಷ ಅದೇ ಹಡಗು ಪ್ರವಾಸಕ್ಕೆಂದು ಬಂದಾಗ ಅಲ್ಲಿ ಜಿಪುಣನ ಎಲುಬಿನ ಹಂದರ ಮಾತ್ರ ಇತ್ತು


ಮಿತಿಯಲ್ಲಿರುವ ಆಸೆ ಆಶೀರ್ವಾದ, 

ದರಾಸೆ ಮನುಷ್ಯನನ್ನು ಅಂಧನನ್ನಾಗಿಸುತ್ತದೆ. ಅತಿಯಾದ ದುರಾಸೆ ಕೊನೆಗೆ ವಿನಾಶವನ್ನು ತರುತ್ತದೆ.

-ಶ್ರೀ ಸಿದ್ದೇಶ್ವರ ಸ್ವಾಮೀಜಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು