Saturday, March 16, 2024

 ಕಥೆ-337

ಕುರುಡನ ಮಗ ಕುರುಡ

  ಒಮ್ಮೆ ಪಾಂಡವರ ರಾಜ್ಯದಲ್ಲಿ ಉತ್ಸವ ಏರ್ಪಡಿಸಲಾಗಿತ್ತು. ಅದಕ್ಕೆ ಕೌರವರನ್ನು ಆಮಂತ್ರಿಸಲಾಗಿತ್ತು. ದುರ್ಯೋಧನನು ತನ್ನ ಎಲ್ಲ ಅಣ್ಣ ತಮ್ಮಂದಿರೊಂದಿಗೆ ಅಲ್ಲಿಗೆ ಆಗಮಿಸಿದ. ಅಲ್ಲಿದ್ದ ಭವ್ಯ ಮಂಟಪದಲ್ಲಿ ಅವರಿಗೆಲ್ಲ ಆಸನಗಳನ್ನು ಹಾಕಲಾಗಿತ್ತು. ಇನ್ನೊಂದೆಡೆ ಪಂಚ-ಪಾಂಡವರೆಲ್ಲ ಕುಳಿತಿದ್ದರು. ಅಲ್ಲಿ ದ್ರೌಪದಿಯೂ ಕುಳಿತಿದ್ದಳು. ಆ ಸಭಾಭವನವನ್ನು ಚಿತ್ರ ವಿಚಿತ್ರವಾಗಿ ಅಲಂಕರಿಸಲಾಗಿತ್ತು. ಅಲ್ಲಿಯ ನೆಲವೆಲ್ಲ ನೀರಿನಂತೆ ಕಾಣುತ್ತಿತ್ತು. ವೇದಿಕೆಯತ್ತ ನಡೆದಿದ್ದ ದುರ್ಯೋಧನನು ನೀರಿನಂತಿದ್ದ ನೆಲವನ್ನು ಕಂಡು ಅದು ನೀರೆಂದು ಭಾವಿಸಿದ. ದಾಟುವುದಕ್ಕೆಂದು ಒಂದಿಷ್ಟು ಕಾಲನ್ನು ಬಟ್ಟೆಯನ್ನು ಎತ್ತಿದ ತಕ್ಷಣ ಅಲ್ಲಿದ್ದ ದ್ರೌಪದಿ, ‘ಅಂಧಸ್ಯ ಪುತ್ರಃ ಅಂಧಃ’ ‘ಕುರುಡನ ಮಗ ಕುರುಡ’ ಎಂದಳು. ಕ್ಷಾತ್ರ ತೇಜದವನೂ, ಕುರುಕುಲದ ಅಧಿಪತಿಯೂ ಆದ ದುರ್ಯೋಧನನ ಹೃದಯಕ್ಕೆ ಅದು ಜೋರಾಗಿ ಇರಿಯಿತು. ದುರ್ಯೋಧನನು ಮಾತ್ರವಲ್ಲ ಆತನ ತಂದೆಯನ್ನೂ ದ್ರೌಪದಿಯು ನಿಂದಿಸಿದ್ದಳು. ಇದು ದುರ್ಯೋಧನನಿಂದ ಸಹಿಸಲಾಗಲಿಲ್ಲ.

ಮರುಕ್ಷಣವೇ ಸ್ವಾಭಿಮಾನಿ ಪುರುಷನಾದ ದುರ್ಯೋಧನನು ಅವಹೇಳನದ ಈ ಘಟನೆಯ ಸೇಡನ್ನು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ. ಹೀಗೆ ದ್ರೌಪದಿಯ ಆ ಒಂದು ಬಿರುಸಿನ ನುಡಿಯೇ ಮಹಾಭಾರತಯುದ್ಧಕ್ಕೆ ಬೀಜವಾಗಿ ಪರಿಣಮಿಸಿತು. 

ಮಾತೆ ಮುತ್ತು ಮಾತೆ ಮೃತ್ಯು.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು