Monday, June 24, 2024

 ಕಥೆ-435

ಯಜಮಾನರನ್ನೇ ಸುಡುವ ಬೆಂಕಿ

ಕೆಲವರಿಗೆ ಒಂದು ರೋಗವಿರುತ್ತದೆ. ತಾವು ಎಷ್ಟೇ ದೊಡ್ಡವರಾಗಿದ್ದರೂ, ಬಹಳ ಶ್ರೇಷ್ಠ ಸ್ಥಾನದಲ್ಲಿದ್ದರೂ ಮತ್ತೊಬ್ಬರ ಬಗ್ಗೆ ಯಾರಾದರೂ ಒಳ್ಳೆಯ ಮಾತು ಹೇಳಿದರೆ ಹೊಟ್ಟೆ ಉರಿದು ಹೋಗುತ್ತದೆ, ತಳಮಳವಾ­ಗುತ್ತದೆ, ಅದನ್ನು ತಡೆದು­ಕೊಳ್ಳು­ವು­ದು ಆಗುವುದಿಲ್ಲ. ಹೀಗೆ ಇರುವವರ ಬದುಕು ಹೇಗಾ­ಗು­ತ್ತದೆ ಎಂದು ಹೇಳುವ ಸುಂದರವಾದ ಕಥೆಯನ್ನು ನೇಪಾಳದಲ್ಲಿ ಜನ ಹೇಳುತ್ತಾರೆ.

ದೇಶದ ರಾಜನಿಗೆ ಯಾರೋ ಪರದೇಶದವರು ವಿಶೇಷ ಲಕ್ಷಣದ ಆನೆಮ­ರಿ­ಯನ್ನು ಕಾಣಿಕೆಯಾಗಿ ಕೊಟ್ಟರು. ಅದು ಬೆಳೆದಂತೆಲ್ಲ ಮತ್ತಷ್ಟು ವಿಶೇಷವಾಗಿ ಕಾಣ­­­­­ತೊಡಗಿತು. ಅದರ ಮೈಕಾಂತಿ ಅಪರೂಪವಾಗಿತ್ತು. ಅದರ ದೊಡ್ಡ ಗಾತ್ರ, ಗಂಭೀರ­­­ವಾದ ನಡೆ, ಸೌಮ್ಯ ವರ್ತನೆ ಎಲ್ಲರಿಗೂ ಪ್ರಿಯ­ವಾಗಿತ್ತು. ಅದನ್ನು ನೋಡಿ­­ಕೊ­­ಳ್ಳುತ್ತಿದ್ದ ಮಾವುತನಿಗೂ ಅದು ತುಂಬ ವಿಶೇಷ ಎನ್ನಿಸಿತು.

ಅವನು ಮೆಲು­ವಾಗಿ ಏನು ಹೇಳಿದರೂ ತಕ್ಷಣವೇ ಮಾಡಿಬಿ­ಡುತ್ತಿತ್ತು. ರಾಜನಿಗೆ ಅದರ ಮೇಲೆ ಬಲು ಪ್ರೀತಿ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿ ಅದರ ಮೇಲೆ ಅಂಬಾರಿ­ಯನ್ನು ಬಿಗಿಸಿ ತಾನು ಅದರಲ್ಲಿ ಕುಳಿತು ನಗರ ಪ್ರದಕ್ಷಿಣೆಗೆ ಹೋಗು­ತ್ತಿದ್ದ. ನಗರದ ಜನರಿಗೆ ಇದೊಂದು ಸುಂದರ ದೃಶ್ಯ. ಒಂದು ತಿಂಗಳು ಈ ರೀತಿ ಮೆರವಣಿಗೆ­ಯಾದ ಮೇಲೆ ಅವ­­ನಿಗೆ ಜನರು ಮಾತನಾಡಿಕೊಳ್ಳುವುದು ಕಿವಿಗೆ ಬಿತ್ತು. ಅವರು ಸುಂದರವಾದ ಅನೆ­­ಯನ್ನು ಹೊಗಳುವಾಗ ಅವನ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿರಲಿಲ್ಲ.

ಇಷ್ಟು ಅದ್ಭುತ­­­­ವಾದ ಆನೆ ನಿಜವಾಗಿಯೂ ಚಕ್ರ­ವರ್ತಿಯ ಬಳಿಗೆ ಇರಬೇಕು, ನಮ್ಮ ಸಾಮಂತ ರಾಜನ ಬಳಿ ಅಲ್ಲ ಎಂದು ಕೆಲವರೆಂದರೆ ಮತ್ತೆ ಕೆಲವರು, ಅಯ್ಯೋ, ಅಷ್ಟು ದೊಡ್ಡ ಆನೆಯ ಮೇಲೆ ನಮ್ಮ ರಾಜ ಒಣಗಿದ ಮರದ ಬೊಂಬೆಯಂತೆ ಕಾಣು­­­ತ್ತಾನೆ ಎಂದರು. ತನಗಿಂತ ಹೆಚ್ಚಾಗಿ ಜನ ಆನೆ­ಯನ್ನು ಹೊಗಳಿದಾಗ ರಾಜ ಕೋಪ­­­­­ದಿಂದ ಕುದಿದು ಹೋದ. ಒಂದು ದಿನ ಮಾವುತ­ನನ್ನು ಕರೆದು ಕೇಳಿದ, ‘ನಮ್ಮ ಪಟ್ಟದಾನೆ ನಿಜವಾಗಿ­ಯೂ ವಿಶೇಷ­ವಾಗಿ­ದೆಯೇ?’ ಆತ, ‘ಪ್ರಭೂ, ನಾವು ತಲೆ­­­­­ತಲಾಂತರದಿಂದ ಆನೆಗಳನ್ನೇ ನೋಡಿ­ಕೊಂಡ­ವರು. ಆದರೆ ಇಂಥ ಆನೆಯನ್ನು ನಾವು ಕಂಡೇ ಇಲ್ಲ.

ಇದೆಲ್ಲೋ ದೇವತೆಯೇ ಇರಬೇಕು’ ಎಂದ. ರಾಜನಿಗೆ ಮತ್ತಷ್ಟು ರೋಷ ಉಕ್ಕಿತು. ‘ಹಾಗಾದರೆ ಅದು ನೀನು ಹೇಳಿದ್ದನ್ನೆಲ್ಲ ಮಾಡು­ತ್ತ­ದೆಯೇ?’ ಎಂದು ಕೇಳಿದ. ಮಾವುತ, ‘ಸ್ವಾಮೀ, ಅದಕ್ಕೆ ನಾನು ಬಾಯಿ ಬಿಟ್ಟು ಯಾವ ಆಜ್ಞೆ­ಯನ್ನೂ ಮಾಡುವ ಕಾರಣವಿಲ್ಲ. ನನ್ನ ಮನಸ್ಸಿಗೆ ಹೊಳೆದದ್ದನ್ನೇ ತಕ್ಷಣ ಮಾಡುತ್ತದೆ’ ಎಂದ. ಹಾಗಾದರೆ ನಾಳೆ ಅದನ್ನು ಪರ್ವತದ ತುದಿಗೆ ಕರೆದು­ಕೊಂಡು ನಡೆ ಎಂದು ಆಜ್ಞೆ ಮಾಡಿದ ರಾಜ.

ಅವನ ಬುದ್ಧಿವಂತನಾದ ಮಂತ್ರಿಗೆ ರಾಜನ ಕುತಂತ್ರ ಹೊಳೆಯಿತು. ಮರುದಿನ ರಾಜ ಮತ್ತು ಮಂತ್ರಿ ಕೂಡ ಪರ್ವತದ ಕೋಡಿಗೆ ನಡೆದರು. ಆನೆ ಅಲ್ಲಿಗೆ ಸರಾಗ­ವಾಗಿ ನಡೆದುಬಂತು. ಅದು ಪ್ರಪಾತಕ್ಕೆ ಎದುರಾಗಿ ಅಂಚಿಗೇ ನಿಲ್ಲುವಂತೆ ರಾಜ ಹೇಳಿದ. ಅದು ತೀರ ಅಂಚಿಗೇ ಹೋಗಿ ನಿಂತಿತು. ನಂತರ ಮುಂದಿನ ಎರಡು ಕಾಲು­­ಗ­­­ಳನ್ನು ಎತ್ತಿ ಹಿಂಗಾಲುಗಳ ಮೇಲೆ ನಿಲ್ಲುವಂತೆ ಹೇಳಿದ. ಅದು ಹಾಗೆ ಮಾಡಿತು. ಆಮೇಲೆ ಒಂದೇ ಕಾಲಿನ ಮೇಲೆ ನಿಲ್ಲು ಎಂದ. ಅದು ಅಂತೆಯೇ ನಿಂತಿತು.

ಈರ್ಷೆಯಿಂದ ರಾಜ ಹೇಳಿದ, ಪ್ರಪಾತದಲ್ಲಿ ಹಾರಿಕೋ. ಆನೆ ತಕ್ಷಣ ತಿರುಗಿ ಅವನಿ­ದ್ದ­ಲ್ಲಿಗೆ ಬಂದು ಆತನನ್ನು ಸೊಂಡಿಲಿನಲ್ಲಿ ಹಿಡಿದು ಗರ­­­ಗರನೇ ತಿರು­ಗಿಸಿ ಪ್ರಪಾತಕ್ಕೆ ಎಸೆದು­­ಬಿಟ್ಟಿತು. ನಂತರ ಜ್ಞಾನಿ ಮಂತ್ರಿಯನ್ನು ಬೆನ್ನ­ಮೇಲೆ ಕೂಡ್ರಿಸಿಕೊಂಡು ನಗರಕ್ಕೆ ಬಂದು ಸಿಂಹಾಸನದ ಮೇಲೆ ಕೂಡ್ರಿಸಿತು. ಜನರೂ ಆನೆಯ ತೀರ್ಮಾನ­ವನ್ನು ಒಪ್ಪಿದರು. ಈರ್ಷೆ, ದ್ವೇಷಗಳು ಬೆಂಕಿ ಇದ್ದಂತೆ. ಅದನ್ನು ಹೊಟ್ಟೆ­­­ಯಲ್ಲಿ ತುಂಬಿಕೊಂಡ ಯಜಮಾನರನ್ನೇ ಮೊದಲು ಬಲಿ ತೆಗೆದು­ಕೊಳ್ಳು­ತ್ತವೆ. ಕೃಪೆ : ಮುಖ ಪುಸ್ತಕ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು