Monday, July 1, 2024

 ಕಥೆ-443

ವಾಚಾಳಿತನಕ್ಕೆ ದೊರೆತ ಶಿಕ್ಷೆ

ಇದೊಂದು ಆಫ್ರಿಕಾ ಖಂಡದ ವಿಚಿತ್ರವಾದ ಜನಪದ ಕಥೆ. ಕಾಡಿನ ಜನಾಂಗ­­­ಕ್ಕೊಬ್ಬ ನಾಯಕ. ಅವನಿಗೆ ಮಾರ್ಗದರ್ಶನ ಮಾಡಲು ಒಬ್ಬ ಪುರೋಹಿತನಂತಿದ್ದ ಧರ್ಮಗುರು. ಆ ಧರ್ಮಗುರುವಿಗೆ ವಿಪರೀತವಾಗಿ ಮಾತ­ನಾಡುವ ಚಾಳಿ. ಬಾಯಿ ತೆರೆದರೆ ಮುಚ್ಚುವವನೇ ಅಲ್ಲ. ನಾಯಕ ಒಂದು ಪ್ರಶ್ನೆ ಕೇಳಿದರೆ ಎರಡು ತಾಸು ಬಿಟ್ಟೂ ಬಿಡದೆ ಉತ್ತರ ಕೊಡುತ್ತಿದ್ದ. ಹೆದರಿಕೆ­ಯಿಂದ ನಾಯಕ ಪ್ರಶ್ನೆ ಕೇಳುವುದನ್ನೇ ತಪ್ಪಿಸಿಕೊಳ್ಳುತ್ತಿದ್ದ. ಹೇಗಾದರೂ ಮಾಡಿ ಈ ಪುರೋಹಿತನ ಬಾಯಿ ಮುಚ್ಚಿಸ­ಬೇಕೆಂದು ಯೋಚಿಸುತ್ತಿದ್ದ ನಾಯಕ.

ಒಂದು ದಿನ ನಾಯಕ ಕಾಡಿನ ಅಂಚಿಗೆ ಒಂದು ದೊಡ್ಡ ಮುತ್ತುಗದ ಮರದ ಕೆಳಗೆ ಮಲಗಿದ್ದ. ಎಚ್ಚರಾದ ಮೇಲೆ ಸುತ್ತಮುತ್ತ ನೋಡಿದ. ಅಲ್ಲಿ ಎಲ್ಲೆ­ಡೆಗೂ ಮರದ ಎಲೆಗಳು ಬಿದ್ದಿದ್ದವು. ಅವುಗಳನ್ನು ಎತ್ತಿ ನೋಡಿದಾಗ ಭಾರಿ ಆಶ್ಚರ್ಯ­ವಾ­ಯಿತು. ಪ್ರತಿಯೊಂದು ಎಲೆಯ ಮಧ್ಯೆ ಒಂದು ತೂತು. ಬರೀ ತೂತಲ್ಲ, ಚಿತ್ರ­ವಿಚಿತ್ರ ಆಕೃತಿಗಳು. ತಲೆ ಎತ್ತಿ ನೋಡಿದ. ಮರದ ಎಲೆಗಳ ಮಧ್ಯದಲ್ಲಿ ಇದೇ ರೀತಿ ಚಿತ್ರದ ತೂತುಗಳು. ತನ್ನ ಜೊತೆಯವರಿಗೆ ಈ ವಿಚಿತ್ರದ ಬಗ್ಗೆ ಕೇಳಿದ. ಅವರು ಅಲ್ಲಲ್ಲಿ ತನಿಖೆ ಮಾಡಿ ಒಬ್ಬ ಕುಂಟ ಹುಡುಗ­ನನ್ನು ಕರೆತಂದರು.

ಅವನು ಅಸಾಮಾನ್ಯ ಗುರಿಕಾರ. ಊರಿನ ಹುಡುಗ ಹುಡುಗಿ­ಯರು ಆತನನ್ನು ಕರೆದು­ಕೊಂಡು ಮರದ ಬಳಿಗೆ ಬರುವರು. ಅವರು ಅಪೇಕ್ಷಿಸಿದಂತೆ ಆತ ಸಣ್ಣ ಸಣ್ಣ ಹರಳುಗಳನ್ನು ಗುರಿಯಿಟ್ಟು ಎಲೆಗಳಿಗೆ ಹೊಡೆಯುವನು. ಅದು ಹೇಗೆಂದರೆ ಕಲ್ಲು ಬಡಿದೊಡನೆ ಎಲೆಯ ಮಧ್ಯದಲ್ಲಿ ಅವರು ಅಪೇಕ್ಷಿಸಿದ - ನಾಯಿ, ಸಿಂಹ, ಜಿಂಕೆ ಇಂಥ ಚಿತ್ರದ ತೂತುಗಳಾ­ಗುತ್ತಿದ್ದವು. ಅವುಗಳನ್ನು ನೋಡಿ ಮಕ್ಕಳು ಸಂತೋಷಪಡುತ್ತಿದ್ದರು. ನಾಯಕನೂ ಅವನಿಗೆ ಕೆಲವು ಕಲ್ಲು ಎಸೆಯಲು ಹೇಳಿದ.

ಕುಂಟ ಹುಡುಗ ನಾಯಕ ಹೇಳಿದ ಚಿತ್ರದಂತಿರುವ ತೂತುಗಳಾ­ಗುವಂತೆ ಹೊಡೆದ. ತಕ್ಷಣವೇ ನಾಯಕನಿಗೆ ಹೊಳೆಯಿತು, ಈ ಹುಡುಗನಿಂದ ಪುರೋಹಿ­ತನ ಬಾಯಿ ಮುಚ್ಚಿಸಬಹದು. ಅವನಿಗೆ ತನ್ನ ಕಷ್ಟ ಹೇಳಿಕೊಂಡ. ಹುಡುಗ ಹೇಳಿದ, ‘ಪ್ರಭು, ನನಗೆ ಒಂದು ಬುಟ್ಟಿಯಷ್ಟು ಒಣಗಿದ ಕುರಿ ಹಿಕ್ಕೆ ಕೊಟ್ಟರೆ ಇದನ್ನು ಮಾಡು­ತ್ತೇನೆ’. ನಾಯಕ ಒಪ್ಪಿ ಅವನನ್ನು ತನ್ನ ಮನೆಗೆ ಕರೆದೊಯ್ದ. ಮರುದಿನ ಪುರೋಹಿತನನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡ. ನಾಯಕನ ಹಿಂದೆ ಒಂದು ಪರದೆಯ ಬದಿಯಲ್ಲಿ ಹುಡುಗ ಕುಳಿತುಕೊಂಡ.

ನಾಯಕ ಪ್ರಶ್ನೆ ಕೇಳಿದೊಡನೆ ಪುರೋ­ಹಿತ ಮಾತನಾಡಲು ಪ್ರಾರಂಭಿಸಿದ. ಹುಡುಗ ಕುಳಿತಲ್ಲಿಂದ ನೇರವಾಗಿ ಪುರೋಹಿತನ ತೆರೆದ ಬಾಯಿಯಲ್ಲಿ ಹಿಕ್ಕೆಗಳು ಬೀಳುವಂತೆ ಎಸೆಯ­ತೊಡಗಿದ. ಪುರೋಹಿತನಿಗೆ ಅದೇನೆಂದು ತಿಳಿಯದೇ ನುಂಗುತ್ತ ಬಂದ. ಹುಡುಗ ಎಸೆತದ ವೇಗವನ್ನು ಹೆಚ್ಚಿಸಿದ. ಕ್ಷಣಾರ್ಧದಲ್ಲಿ ಪುರೋಹಿತನ ಬಾಯಿ ಹಿಕ್ಕೆಗಳಿಂದ ತುಂಬಿ ಮಾತನಾಡುವುದು ಅಸಾಧ್ಯ­ವಾಯಿತು. ಅವು ಎಲ್ಲಿಂದ, ಹೇಗೆ ಬರುತ್ತವೆ ಎಂಬುದೇ ತಿಳಿಯು­ತ್ತಿರಲಿಲ್ಲ.

ನಂತರ ಬಾಯಿಯಿಂದ ಹೊರಗೆ ತೆಗೆದು, ಹಿಕ್ಕೆಗಳನ್ನು ನೋಡಿ ನಾಚಿಕೆಯಿಂದ ಓಡಿಹೋದ. ನಂತರ ಪ್ರತಿಬಾರಿ ಮಾತನಾಡುವಾಗ ಹೆಚ್ಚು ಬಾಯಿ ತೆರೆಯದೆ ಮಿತವಾಗಿ ಮಾತನಾ­ಡತೊಡಗಿದ. ನಾಯಕ ಹುಡುಗನಿಗೆ ನಾಲ್ಕು ಗ್ರಾಮ­ಗಳನ್ನು ನೀಡಿ ಅವನನ್ನೇ ನಾಯಕನನ್ನಾಗಿ ಮಾಡಿದ. ಇಲ್ಲಿ ಎರಡು ಸಂದೇಶಗಳು, ಯಾವುದೇ ಒಂದು ಕಲೆ, ಅದು ಕಲ್ಲು ಹೊಡೆ­ಯುವುದೇ ಆಗಿರಬಹುದು, ಅದರಲ್ಲಿ ತುಂಬ ಪರಿಣತಿ ಹೊಂದಿದ್ದರೆ ಬದುಕಿ­ನಲ್ಲಿ ಯಶ ದೊರೆಯುತ್ತದೆ. ಎರಡನೆ­ಯದು, ನೀವು ಎಷ್ಟೇ ದೊಡ್ಡ ವಾಗ್ಮಿಯಾಗಿದ್ದರೂ, ಜ್ಞಾನಿಯಾ­ಗಿ­ದ್ದರೂ ಮಾತು ಮಿತವಾಗಿದ್ದರೆ ಸುಖ ಕೊಡುತ್ತದೆ. ಅದು ಅತಿಯಾದರೆ ಬಾಯಿ ಮುಚ್ಚಿಸಲು ಜನ ಉಪಾಯ­ಗಳನ್ನು ಮಾಡಬೇಕಾಗುತ್ತದೆ. ಆ ಉಪಾ­ಯ­ಗಳು ಅಷ್ಟು ಹಿತವನ್ನು ನೀಡಲಿಕ್ಕಿಲ್ಲ. ಕೃಪೆ :ಮುಖ ಪುಸ್ತಕ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು