Sunday, September 1, 2024

 ಕಥೆ-505

ಇಂದ್ರಿಯ ನಿಗ್ರಹ

ಅಮೇರಿಕದೋಳೊಬ್ಬಳು ಪ್ರೊಪೋಸ್ ಮಾಡಿದಾಗ ಸ್ವಾಮಿ ವಿವೇಕಾನಂದ ನಡ್ಕೊಂಡ ರೀತಿ .

ಒಂದ್ಸಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಕ್ಕೆ ಅಮೇರಿಕಕ್ಕೆ ಹೋಗಿದ್ರಂತೆ. ಅವರ ಬುದ್ಧಿವಂತಿಕೆ ನೋಡಿ ನಿಬ್ಬೆರಗಾದ ಅಮೇರಿಕನ್ ಹೆಂಗಸೊಬ್ಬಳಿಗೆ ಒಂದು ವಿಚಿತ್ರವಾದ ಆಸೆ ಶುರುವಾಯಿತಂತೆ.

ಹೋಗಿ ಕೇಳೇ ಬಿಟ್ಳಂತೆ, ‘ನನ್ನ ಮದುವೆ ಆಗ್ತೀರಾ?’ ಅಂತ.

ಆಗ ವಿವೇಕಾನಂದರು ‘ಈ ಯೋಚನೆ ಯಾಕೆ ಬಂತು?’ ಅಂದ್ರಂತೆ.

ಅದಕ್ಕೆ ಆಕೆ, ‘ನಿಮ್ಮ ಬುದ್ಧಿವಂತಿಕೆ ನೋಡಿ ನಾನು ಮೂಕವಿಸ್ಮಿತಳಾಗಿಬಿಟ್ಟಿದೀನಿ. ನನಗೆ ನಿಮ್ಮ ಥರಾನೇ ಒಂದು ಮಗು ಬೇಕು, ಕೊಡ್ತೀರಾ? ನನ್ನ ಮದುವೆ ಆಗ್ತೀರಾ?’ ಅಂದಳಂತೆ.

ಆಗ ವಿವೇಕಾನಂದರು ಥಟ್ಟಂತ ಕೊಟ್ಟ ಉತ್ತರ ಹೀಗಿತ್ತಂತೆ:

‘ನಿಮ್ಮ ಆಸೆ ನನಗೆ ಅರ್ಥ ಆಯಿತು. ಆದರೆ ಅಂಥ ಒಂದು ಮಗೂನ ಹೆರೋದು... ಅದು ಬುದ್ಧಿವಂತವಾಗಿದೆಯೋ ಇಲ್ಲವೋ ಅಂತ ಅರ್ಥ ಮಾಡ್ಕೊಳೋದು... ಇದೆಲ್ಲ ಬಹಳ ದೊಡ್ಡ ಪ್ರಕ್ರಿಯೆ... ತುಂಬಾ ಸಮಯ ತೊಗೊಳೋ ಕೆಲಸ... ಕೊನೆಗೆ ಬೇಕಾದ ಫಲ ಸಿಗದೇನೂ ಇರಬಹುದು. ಆದ್ದರಿಂದ ಅದಕ್ಕಿಂತ ಒಳ್ಳೇ ಆಯ್ಕೆ ಕೊಡ್ತೀನಿ, ಕೇಳಿ: ನಿಮಗೆ ನನ್ನ ಥರ ಇರೋ ಬುದ್ಧಿವಂತ ಮಗು ಬೇಕು ತಾನೇ? ನಾನೇ ಇದೀನಲ್ಲ, ನನ್ನೇ ನಿಮ್ಮ ಮಗುವಾಗಿ ಸ್ವೀಕರಿಸಿಕೊಂಡು ಬಿಡಿ... ನನ್ನ ತಾಯಿಗೆ ಸಮಾನ ನೀವು... ಇದರಿಂದ ನಿಮ್ಮ ಆಸೆ ಈಡೇರಿ ನೆಮ್ಮದಿ ಸಿಗುತ್ತದೆ...’

ಉತ್ತರ ಕೇಳಿ ಆಕೆ ದಂಗಾದಳು!

ವಿವೇಕಾನಂದರದ್ದು ಅದ್ಭುತ ವ್ಯಕ್ತಿತ್ವ.ಇಂದ್ರಿಯನಿಗ್ರಹದಲ್ಲಿ ಇಷ್ಟು ಪಳಗಿರುವ ವ್ಯಕ್ತೀನೇ, ಇಂತಹ ಅದ್ಭುತವಾದ ಉತ್ತರ ಕೊಡಕ್ಕೆ ಸಾಧ್ಯ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂಥವರು ಯಾವಾಗಲೂ ಪೂಜ್ಜನೀಯರಾಗಿರುತ್ತಾರೆ

ಕೃಪೆ : ಕಿಶೋರ್.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು