Monday, November 11, 2024

 ಕಥೆ-577

ನಮ್ಮ ತಲೆಯ ಮೇಲೆ ನಮ್ಮದೇ ಕೈ

ಮನುಷ್ಯನ ಜೀವನವೆಂದರೆ ಹಾಗೆಯೇ. ಏನಾದರೊಂದು ಸಮಸ್ಯೆ ಇದ್ದೇ ಇರುತ್ತದೆ. ಕಾರಣ ಮಾತ್ರ ನಿಗೂಢ ಅವ್ಯಕ್ತ. ಕೆಲವೊಮ್ಮೆ ಸಮಸ್ಯೆಗಳ ಸರಮಾಲೆಯೇ ಬಂದೊದಗಿದಾಗ ಕೈಕಾಲು ಬಿಡುವುದುಂಟು. ಹೇಗಾದರೂ ಮಾಡಿ ಅದರ ಮೂಲವನ್ನು ಕಂಡು ಹಿಡಿದು ಓಡಿಸಿ ಬಿಡಬೇಕೆನ್ನುವಷ್ಟು ಬೇಸರ ತರಿ ಸುತ್ತದೆ.ಆದರೆ, ಪರಿಹಾರ ಹೇಗೆ ? ಯಾರನ್ನು ಕೇಳೋಣ? ವೈದ್ಯರನ್ನು ಕೇಳಿದರೆ, ವಾತ, ಪಿತ್ಥ ಇತ್ಯಾದಿ ಧಾತುಗಳ ವಿಕಾರ, ಪಥ್ಯ ಮಾಡಬೇಕು ಎನ್ನುತ್ತಾರೆ. ಜ್ಯೋತಿಷಿಗಳನ್ನು ಕೇಳಿದರೆ, ಯಾವುದೋ ಗ್ರಹದ ಬಾಧೆ ಪರಿಹಾರ ಮಾಡಬೇಕು ಎಂದು ಬಿಡುತ್ತಾರೆ. ಮಾಂತ್ರಿಕರನ್ನೋ ಮತ್ತಿನ್ನಾರನ್ನೋ ಕೇಳಿದರೆ, ಏನೋ ಭೂತ-ಪ್ರೇತಗಳ ಬಾಧೆ ಇರಬೇಕು ಎನ್ನುತ್ತಾರೆ. ಹಿರಿಯರನ್ನು, ವೇದಾಂತಿಗಳನ್ನು ಕೇಳಿದರೆ ಜನ್ಮಾಂತರದ ಕರ್ಮ, ಅನುಭವಿಸಲೇಬೇಕು ಎಂದು ಹೇಳಿಬಿಡುತ್ತಾರೆ. ಒಟ್ಟಾರೆ ಸ್ಪಷ್ಟ ಉತ್ತರ ಎಲ್ಲೂ ಸಿಗುವುದಿಲ್ಲ. ಪ್ರಾಯಶಃ ಎಲ್ಲಾ ಸಮಸ್ಯೆಗಳ ಮೂಲ ಕಾರಣಗಳು ನಮ್ಮೊಳಗೇ ಹುದುಗಿರುತ್ತದೆ. ಜೊತೆಗೆ ಪರಿಹಾರವೂ. ಹೊರಗೆ ಎಲ್ಲೋ ಹುಡುಕುವುದನ್ನು ನಿಲ್ಲಿಸಬೇಕು. ಅಂತರಂಗದ ಕದ ತೆರೆದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಹೊರಗಿನವರು ಎಷ್ಟಾದರೂ ಸಲಹೆ ಕೊಡಲಷ್ಟೇ ಸಮರ್ಥರು. ಪರಿಹಾರ ನಮ್ಮ ಕೈಯಲ್ಲಿದೆ

👍💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು