ಕಥೆ-609
ಸುಖ ಜೀವನದ ಮಂತ್ರಗಳು
1 ಹಿತವಾಗಿ ಮಾತಾಡಿ ಶಾಂತಿ ಸಿಗುತ್ತದೆ
2 ಅಹಂಕಾರ ಬಿಡಿ ದೊಡ್ಡವರಾಗುವಿರಿ
3 ವಿಚಾರ ಮಾಡಿ ಜ್ಞಾನ ಸಿಗುತ್ತದೆ
4 ಸೇವೆ ಮಾಡಿ ಶಕ್ತಿ ದೊರೆಯುತ್ತದೆ
5 ಸಹನೆಯಿಂದಿರಿ ದೈವತ್ವ ದೊರೆಯುತ್ತದೆ
6 ಸಂತೋಷದಿಂದಿರಿ ಸುಖ ದೊರೆಯುತ್ತದೆ
ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ
ಅಂಶ = ವಿಶ್ವಾಸ .
ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು = ಅಜ್ಞಾನ.
ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = ಸಜ್ಜನರ ನಿಷ್ಕ್ರಿ,ಯತೆ
ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = ನಾಲಿಗೆ.
ವರಗಳಲ್ಲಿ ಅತೀ ದೊಡ್ಡ ವರ = ಆರೋಗ್ಯ
ದೊಡ್ಡ ಶ್ರೀಮಂತಿಕೆ = ಸಂತೃಪ್ತಿ.
ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = ಮೌನ.
ಒಂದೊಳ್ಳೆ ವಿಚಾರ : ಪರಕೆಯ ಕಡ್ಡಿಗಳು ದಾರದಿಂದ
ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಗಟ್ಟಿ ಆಗಬೇಕಿದೆ ಸಂಬಂಧ ಎಂಬ ದಾರದಿಂದ.