Thursday, March 6, 2025

 ಕಥೆ-682

ಸವಾಲುಗಳ ದೋಣಿಯಲ್ಲಿ

ದೋಣಿಯಲ್ಲಿ


 ಪ್ರಯಾಣಿಸುವಾಗ ತೂತು ಬಿದ್ದರೆ ಮುಳುಗುವುದು ನಿಶ್ಚಿತ. ಆದರೆ, ಬದುಕುಳಿಯಲು ಇರುವ ಚಿಕ್ಕ ಸಮಯದಲ್ಲಿ ಆಗುತ್ತಿರುವ ತೂತು ಮುಚ್ಚಬೇಕೋ ಅಥವಾ ಹೇಗಾದರೂ ದೋಣಿಯೊಳಗೆ ತುಂಬುತ್ತಿರುವ ನೀರನ್ನು ಹೊರಗೆ ಹಾಕಬೇಕೋ ಎಂಬ ಗೊಂದಲ. ಗುರಿ ಮುಟ್ಟುವ ಪ್ರಯತ್ನದಲ್ಲಿ ಪ್ರಯತ್ನದಲ್ಲಿ ಕೆಲವೊಮ್ಮೆ ಏಕಕಾಲಕ್ಕೆ ಅನೇಕ ಸವಾಲುಗಳು ಎದುರಾಗುತ್ತವೆ. ಇವುಗಳನ್ನು ಸರಿಯಾಗಿ ನಿರ್ವಹಿಸುವ ತಂತ್ರ ತಿಳಿದಿಲ್ಲದಿದ್ದರೆ ಸಮಯವೂ ಸುಮ್ಮನೆ ವ್ಯರ್ಥವಾಗುತ್ತದೆ. ಆದ್ದರಿಂದ ಮೊದಲೇ ಎಲ್ಲದಕ್ಕೂ ಅಣಿಯಾಗಿರಬೇಕು. ಇವೆಲ್ಲದರ ಜತೆಗೆ ಒಂದು ದೋಣಿಯಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಇನ್ನೊಂದು ದೋಣಿಗೆ ಕಾಲಿಡಬಾರದು ಎಂಬ ವಿವೇಚನೆ ಇರುವುದು ಅತ್ಯಗತ್ಯ. ಯಾವ ಸವಾಲು ತಕ್ಷಣಕ್ಕೆ ಅಪಾಯ ತಂದೊಡ್ಡುತ್ತದೆ ಎಂಬುದನ್ನು ಗುರುತಿಸಬೇಕು. ಬಳಿಕ ಅದನ್ನು ಮೊದಲು ಎದುರಿಸಿದರೆ ಸಮಯ ಉಳಿತಾಯ ಆಗುವುದರ ಜತೆಗೆ ಕೆಲಸವೂ ಸುಸೂತ್ರವಾಗಿ ನೆರವೇರುತ್ತದೆ. ಸವಾಲುಗಳನ್ನು ಎದುರಿಸುವಾಗ ಸಮಯ ಪ್ರಜ್ಞೆಯೊಂದಿಗೆ ದೂರದಾಲೋಚನೆ ಇರಲಿ, ಇಲ್ಲವಾದಲ್ಲಿ ಎಲ್ಲವನ್ನೂ ಮೀರಿದ ಸಮಯದಲ್ಲಿ ಭವಿಷ್ಯ ಮುಳುಗಿ ಹೋಗಬಹುದು..

ಕೃಪೆ : ನೆಟ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು