Thursday, August 7, 2025

 ಕಥೆ-817

ಮೊದಲು ಭಯವನ್ನು ಗೆಲ್ಲಿ ...


ನಾನು ನಮ್ಮ ತಂದೆ ಧೀರೂಭಾಯ್ ಅಂಬಾನಿ ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ನಾನು ಕಲಿತ ಮೊದಲ ಪಾರವೆಂದರೆ ಅದು ಧೈರ್ಯ. ಯಾರೇ ಆಗಲೀ, ಧೈರ್ಯವಿಲ್ಲದೆ ವೃತ್ತಿ ಜೀವನದಲ್ಲಾಗಲೀ, ವೈಯಕ್ತಿಕ ಜೀವನದಲ್ಲಾಗಲೀ ಏನನ್ನೂ ಸಾಧಿಸಲಾರರು. ನಾವೇ ಏನೇ ದೊಡ್ಡ ಪ್ರಯತ್ನ ಮಾಡುವುದಕ್ಕೆ ಹೊರಟರೂ, ಒಳಗೊಂದು ಸಣ್ಣ ಅಳುಕು ಇದ್ದೇ ಇರುತ್ತದೆ. ಎಲ್ಲಾದರೂ ನಾವಂದುಕೊಂಡಿದ್ದು .ಪ್ಲಾಪ್ ಆದರೆ ಅಥವಾ ಇರುವುದೆಲ್ಲವ ಬಿಟ್ಟು ಇನ್ನೇನೋ ಅರಸುತ್ತಾ ಹೋಗಿ ಸೋತರೆ ಏನು ಕಥೆ ಎಂಬ ಭಯ ನಾವು ಎಲ್ಲಿಯವರೆಗೂ ಹೆದರುತ್ತಿರುತ್ತೇವೋ, ಅಲ್ಲಿಯವರೆಗೂ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ನಮ್ಮೊಳಗಿರುವ ಒಬ್ಬ ಹೀರೋನನ್ನು ಕಂಡುಕೊಳ್ಳುವುದಕ್ಕೆ ಮೊದಲಿಗೆ ನಾವು ಆ ಭಯವನ್ನು ಗೆಲ್ಲಬೇಕು. ಹಾಗೆ ಗೆಲ್ಲಬೇಕು ಎಂದರೆ ನಮ್ಮಲ್ಲಿ ಧೈರ್ಯವಿರಬೇಕು, ಆತ್ಮವಿಶ್ವಾಸವಿರಬೇಕು.. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಏನನ್ನೋ ಸಾಧಿಸುತ್ತೀನಿ ಎಂಬ ಸ್ಪಿರಿಟ್ ಇರಬೇಕು. ಈ ಮೂರು ಅಂಶಗಳು ನಿಮ್ಮಲ್ಲಿ ಇದ್ದರೆ, ಎಂತಹ ಸಾಧನೆಯನ್ನಾದರೂ ಮಾಡಬಹುದು. ಹಾಗಾಗಿ, ಮೊದಲು ಭಯಬಿಡಿ. ನಾಳೆ ಏನಾಗುತ್ತದೋ ಎಂದು ಹೆದರಬೇಡಿ. ನಾಳೆ ನನ್ನದಾಗುತ್ತದೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಆಗ ನೀವು ಅಂದುಕೊಂಡಿದ್ದ ಕೆಲಸ ಸಾಧಿಸದಿದ್ದರೆ ಕೇಳಿ,


| ಮುಕೇಶ್‌ ಅಂಬಾನಿ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು