Sunday, November 2, 2025

 ಕಥೆ-931


ಸುಖ-ದುಃಖಗಳು ಜೀವನದ ಎರಡು ಶಾಶ್ವತ ದಂಡೆಗಳು.


ಮನುಷ್ಯ ಈ ಜಗತ್ತಿಗೆ ಬರುತ್ತಲೇ ತಾಯಿ-ತಂದೆ ವಾತ್ಸಲ್ಯದ ಧಾರೆ ಎರೆಯುವರು. ಅಣ್ಣ-ತಮ್ಮ, ಬಂಧು-ಬಳಗ ಎಲ್ಲರೂ ಪ್ರೀತಿಯ ಹೊಳೆಯನ್ನೇ ಹರಿಸುವರು. ಉಣಿಸಿ-ತಿನಿಸಿ, ಎತ್ತಿ ಮುದ್ದಾಡಿ ಬೆಳೆಸುವರು.ಓದು ಬರಹ, ಆಟ-ಪಾಠ ಕಲಿಸಿ ಜ್ಞಾನದ ಕ್ಷಿತಿಜ ವಿಸ್ತರಿಸುವರು. ಅದರಿಂದ ದೇಹ ಬಲ, ಮನೋಬಲ, ಆತ್ಮಬಲ ಗಳಿಸಿಕೊಂಡು ಮನುಷ್ಯ ಸಿರಿವಂತನಾಗಿ, ವಿದ್ಯಾವಂತನಾಗಿ, ಜೀವನ್ಮುಕ್ತನಾಗಿ ಸಂತಸದ ಸಾಗರದಲ್ಲಿ ತೇಲಬಹುದು!


ಇದು ಜೀವನದ ಬೆಳಕಿನ ಮುಖದ ಪರಿಚಯವಷ್ಟೆ, ಇದರೊಂದಿಗೆ ದೈಹಿಕ- ಮಾನಸಿಕ ಕಾಯಿಲೆಗಳು, ಅಪಮಾನ, ಅಪಕೀರ್ತಿ,ದಾರಿದ್ರ್ಯ ದುಃಖ ಸಾವು-ನೋವು, ಏಳು-ಬೀಳು, ಉಪವಾಸ-ವನವಾಸ ಎಲ್ಲವೂ ಇದೆ, ಬೆಳಕು ಕತ್ತಲೆ, ಸುಖ- ದುಃಖ, ಸಿಹಿ-ಕಹಿ, ನೋವು-ನಲಿವು ಈ ಬಗೆಯಾದ ದ್ವಂದ್ವಗಳಿಂದ ಕೂಡಿದ್ದೇ ಮಾನವನ ಬದುಕು. ಈ ದ್ವಂದ್ವವನ್ನು ನಾವು ಎಂದಿಗೂ ತಪ್ಪಿಸಲಿಕ್ಕಾಗುವುದಿಲ್ಲ.


ಒಂದು ಬಡಿಗೆಗೆ ಎರಡು ತುದಿಗಳು, ಒಂದೇ ತುದಿಯ ಬಡಿಗೆ ಈ ಜಗತ್ತಿನಲ್ಲಿಯೇ ಇಲ್ಲ. ಆ ಬಡಿಗೆಯ ಒಂದು ತುದಿ ತೆಗೆಯಬೇಕೆಂದು


ನಾವು ಅದನ್ನು ನೂರಾರು ಬಾರಿ ಕತ್ತರಿಸಬಹುದು. ಆಶ್ಚರ್ಯವೆಂದರೆ ಬಡಿಗೆಯ ಆ ನೂರಾರು ತುಂಡುಗಳಿಗೂ ಎರಡು ತುದಿಗಳು ಉಳಿದೇ ಬಿಡುತ್ತವೆ! ಸುಖ-ದುಃಖಗಳು ಮಾನವ ಜೀವನದ ಎರಡು ಶಾಶ್ವತ ದಂಡೆಗಳು.


 ಶ್ರೀ *ಸಿದ್ಧೇಶ್ವರ ಸ್ವಾಮೀಜಿ*

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು