ಕಥೆ-1051
ಮೌಲ್ಯ ಅರಿಯದ ಸ್ಥಳವನ್ನು ಬಿಡು
ಒಬ್ಬ ತಂದೆ ತನ್ನ ಹಳೆಯ, ಕೆಟ್ಟುಹೋದ ಗಡಿಯಾರವನ್ನು ಮಗನಿಗೆ ನೀಡಿ ಅದರ ಬೆಲೆ ವಿಚಾರಿಸಲು ಹೇಳಿದನು. ಮಗ ಮೊದಲು ಗುಜರಿ ಅಂಗಡಿಗೆ ಹೋದಾಗ ಅವರು ಅದನ್ನು ಕೇವಲ 100 ರೂಪಾಯಿಗೆ ಕೇಳಿದರು. ನಂತರ ಗಡಿಯಾರ ಮಳಿಗೆಗೆ ಹೋದಾಗ ಅವರು 1,000 ರೂಪಾಯಿ ನೀಡುತ್ತೇವೆ ಎಂದರು. ಕೊನೆಯದಾಗಿ ಮಗ ಅದನ್ನು ಮ್ಯೂಸಿಯಂಗೆ (ಸಂಗ್ರಹಾಲಯ) ಕೊಂಡೊಯ್ದಾಗ, ಅದರ ಅಪರೂಪದ ವಿನ್ಯಾಸ ಕಂಡು ಅವರು 50 ಲಕ್ಷ ರೂಪಾಯಿ ನೀಡಲು ಮುಂದಾದರು.
ಹೀಗೆ ತಂದೆ ಮಗನಿಗೆ ಹೇಳುತ್ತಾನೆ"ನೀನು ತಪ್ಪು ಜಾಗದಲ್ಲಿದ್ದಾಗ ಜನರು ನಿನ್ನ ಮೌಲ್ಯವನ್ನು ಕಡಿಮೆ ಅಳೆಯುತ್ತಾರೆ. ಆದರೆ ಸರಿಯಾದ ಜಾಗದಲ್ಲಿದ್ದಾಗ ಮಾತ್ರ ನಿನ್ನ ನಿಜವಾದ ಯೋಗ್ಯತೆ ಏನು ಎಂಬುದು ಜಗತ್ತಿಗೆ ತಿಳಿಯುತ್ತದೆ. ನಿನ್ನನ್ನು ಗೌರವಿಸದ ಜಾಗದಲ್ಲಿ ನೀನಿದ್ದು ನಿನ್ನ ಮೌಲ್ಯವನ್ನು ಕುಗ್ಗಿಸಿಕೊಳ್ಳಬೇಡ ಎಂದನು.
ತಪ್ಪು ಪರಿಸರದಲ್ಲಿ ಪ್ರತಿಭೆ ಮಂಕಾಗುತ್ತದೆ; ಸರಿಯಾದ ಪರಿಸರದಲ್ಲಿ ಅದೇ ಪ್ರತಿಭೆ ಇತಿಹಾಸ ಬರೆಯುತ್ತದೆ.
“ಬೀಜ ಮಣ್ಣಿನಲ್ಲಿ ಬಿದ್ದಾಗ ಮಾತ್ರ ಮರವಾಗುತ್ತದೆ; ವ್ಯಕ್ತಿ ಸರಿಯಾದ ವಾತಾವರಣದಲ್ಲಿ ಇದ್ದಾಗ ಮಾತ್ರ ಯಶಸ್ವಿಯಾಗುತ್ತಾನೆ.”
ಮೌಲ್ಯ ಅರಿಯದ ಸ್ಥಳವನ್ನು ಬಿಡು..
ಕೃಪೆ :ನೆಟ್