ಕಥೆ-1062
ಸಮಸ್ಯೆಯಿಂದ ಕೂಡ ಹೊರ ಬರಬಹುದು
ಒಂದು ರಾಜ್ಯದಲ್ಲಿ ಒಬ್ಬ ಸಣ್ಣ ಹುಡುಗ ತುಂಬಾ ಬುದ್ಧಿವಂತ ಇರ್ತಾನೆ. ಆ ಹುಡುಗನ ಅಪ್ಪನನ್ನ ಆ ರಾಜ್ಯದ ರಾಜ ಕರೆದು ಹೇಳ್ತಾನಂತೆ ನಿನ್ನ ಮಗ ತುಂಬಾ ಬುದ್ಧಿವಂತ ಇದ್ದಾನೆ ಅವನು ನನ್ನ ಜೊತೆ ಇರಬೇಕು ಅವನನ್ನ ನನ್ನ ವಶಕ್ಕೆ ಕೊಟ್ಟುಬಿಡು ಅಂತ. ಆ ಹುಡುಗನ ಅಪ್ಪ ತುಂಬಾ ಬೇಜಾರು ಮಾಡ್ಕೊಂಡು ಮನೆಗೆ ಬಂದು ಆ ಹುಡುಗನಿಗೆ ವಿಚಾರ ಹೇಳ್ತಾನೆ. ಆಗ ಆ ಹುಡುಗ ಹೇಳ್ತಾನಂತೆ ಅಷ್ಟೇನಾ ಅಪ್ಪ ನಡಿರಿ, ನಾವು ರಾಜನ ಹತ್ರ ಹೋಗೋಣ ರಾಜನ ಹತ್ರ ನಾನು ಮಾತಾಡ್ತೀನಿ ಅಂತ. ಅರಮನೆಗೆ ಬಂದು ಆ ಹುಡುಗ ರಾಜನ ಹತ್ರ ಮಾತಾಡಿ ನಾನು ನನ್ನ ಅಪ್ಪನ ಜೊತೆ ಇರಬೇಕು ನಮ್ಮಿಬ್ಬರನ್ನು ದೂರ ಮಾಡಬೇಡಿ ಅಂತ ವಿನಂತಿಸುತ್ತಾನೆ..
ಆ ತುಂಬಿದ ಸಭೆಯಲ್ಲಿ ಆ ರಾಜನ ಮಂತ್ರಿ ಎರಡು ಚೀಟಿಗಳನ್ನ ತಂದು ಇದರಲ್ಲಿ ಒಂದು ಚೀಟಿಯಲ್ಲಿ ರಾಜನ ಹೆಸರಿದೆ ಇನ್ನೊಂದು ಚೀಟಿಯಲ್ಲಿ ನಿನ್ನ ಹೆಸರಿದೆ ನೀನು ಇವೆರಡರಲ್ಲಿ ಯಾವುದಾದ್ರೂ ಒಂದನ್ನೇ ಎತ್ತು ನಿನ್ನ ಹೆಸರು ಬಂದ್ರೆ ನೀನು ಹೇಳಿದ ಹಾಗೆ ನಾವು ಕೇಳ್ತೀವಿ ಇಲ್ಲಾ ರಾಜನ ಹೆಸರು ಬಂದ್ರೆ ರಾಜ ಹೇಳಿದ ಹಾಗೆ ನೀನು ಕೇಳಬೇಕು ಅಂತಾನೆ.. ಆ ಹುಡುಗ ಮನಸಲ್ಲೇ ಅಂದ್ಕೋತಾನಂತೆ ಅರಮನೆಯಲ್ಲಿ ರಾಜನ ಮಾತನ್ನ ಬಿಟ್ರೆ ಬೇರೆ ಯಾರ ಮಾತುಕೂಡ ನಡೆಯೋದಿಲ್ಲ, ಈ ಮಂತ್ರಿ ಪಕ್ಕ ಎರಡು ಚೀಟಿಯಲ್ಲೂ ಕೂಡ ರಾಜನ ಹೆಸರನ್ನೇ ಬರ್ಕೊಂಡು ಬಂದಿರ್ತಾನೆ, ನನ್ನನ್ನ ಇಲ್ಲಿ ಸಿಲುಕಿ ಹಾಕಿಸ್ತಾನೆ ಅಂತ, ಆಗ ಆ ಹುಡುಗ ಶಾಂತವಾಗಿ ಯೋಚನೆ ಮಾಡ್ತಾನೆ ಆ ಎರಡು ಚೀಟಿಯಲ್ಲಿ ಒಂದು ಚೀಟಿನ ತೆಗೆದು ಅದನ್ನ ಓಪನ್ ಮಾಡದೆ ಬಾಯಲ್ಲಿ ಹಾಕೊಂಡು ತಿಂದು ನುಂಗಿಬಿಡ್ತಾನೆ ಆಮೇಲೆ ಆ ಹುಡುಗ ಹೇಳ್ತಾನೆ ನನ್ನ ಚೀಟಿಯನ್ನ ನಾನು ಆಯ್ಕೆ ಮಾಡಿಕೊಂಡ ಆಯ್ತು ಈಗ ಆ ಚೀಟಿನ ತೆಗೆರಿ ಅದರಲ್ಲಿ ರಾಜನ ಹೆಸರಿದ್ರೆ ನಾನು ತಿಂದಂತಹ ಚೀಟಿಯಲ್ಲಿ ನನ್ನ ಹೆಸರೇ ಇರುತ್ತೆ, ನಾನು ಹೇಳಿದಾಗೆ ನೀವು ಕೇಳಬೇಕು ಅಂತ... ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗುತ್ತಾನೆ...
ಒಂದು ಕಷ್ಟದ ಸನ್ನಿವೇಶದಲ್ಲಿ ನಾವು ಸಿಗಾಕೊಂಡಾಗ ಗಾಬರಿ ಮಾಡಿಕೊಳ್ಳದೆ ತಾಳ್ಮೆಯಿಂದ ಯೋಚನೆ ಮಾಡಿದಾಗ ಸಮಸ್ಯೆಯಿಂದ ಕೂಡ ಹೊರ ಬರಬಹುದು ಅನ್ನೋದನ್ನ ಈ ಒಂದು ಸಣ್ಣ ಕಥೆಯಿಂದ ನಾವು ಅರ್ಥ ಮಾಡ್ಕೋಬಹುದು..
ಕೃಪೆ :ನೆಟ್
No comments:
Post a Comment