Thursday, December 21, 2023

 ಕಥೆ-250

ಈ ಕ್ಷಣ ಶಾಶ್ವತವಲ್ಲ.

ಒಬ್ಬ ವ್ಯಕ್ತಿ ಜೈನ್ ಗುರುಗಳಲ್ಲಿಗೆ ಬಂದ. "ಗುರೂಜಿ, ಬದುಕಿನ ಯಾವ ಜಂಜಾಟಗಳೂ ನನ್ನನ್ನು ತಾಕಬಾರದು. ಯಾವ ಖುಷಿಯೂ ನನ್ನ ತಲೆಗೇರಬಾರದು. ಸದಾಕಾಲ ಸಮಚಿತ್ತದಿಂದ ಬದುಕಬೇಕೆಂದರೆ ಏನು ಮಾಡಬೇಕು?" ಎಂದು ಕೇಳಿಕೊಂಡ.

ಆಗ ಜೈನ್ ಗುರು ಹೇಳಿದ - "ತುಂಬಾ ಸುಲಭ. ಒಂದೇ ಒಂದು ಮಂತ್ರವನ್ನು ನೀನು ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು". "ಸಮಚಿತ್ತ ಗಳಿಸುವುದು ಅಷ್ಟೊಂದು ಸುಲಭವೇ? ಹಾಗಾದರೆ ಆ ಮಂತ್ರವನ್ನು ನನಗೆ ದಯಪಾಲಿಸು".

"ಈ ಕ್ಷಣ ಶಾಶ್ವತವಲ್ಲ" ಎನ್ನುತ್ತಾರೆ ಜೈನ್ ಗುರು.

"ಹಾಗೆಂದರೆ?"

"ಈ ವಾಕ್ಯಕ್ಕೆ ಎಂಥಾ ಶಕ್ತಿಯಿದೆ ಗೊತ್ತೇ? ಸಂತೋಷದಲ್ಲಿರುವವನಿಗೆ ಎಚ್ಚರಿಕೆಯನ್ನು, ದುಃಖದಲ್ಲಿರುವವನಿಗೆ ಸಮಾಧಾನವನ್ನು ಕೊಡುವ ಏಕೈಕ ವಾಕ್ಯ ಇದು. ನೀನು ಸುಖದ ಸುಪ್ಪತ್ತಿಗೆಯಲ್ಲಿದ್ದಾಗ ಈ ವಾಕ್ಯವನ್ನು ಮರೆಯಬೇಡ. ಏಕೆಂದರೆ, ಸಂತೋಷ ಶಾಶ್ವತವಲ್ಲ. ಹಾಗೆಯೇ ಕಷ್ಟದಲ್ಲಿದ್ದಾಗ ಈ ಮಾತನ್ನು ನೆನಪು ಮಾಡಿಕೊ. ಯಾಕೆ ಗೊತ್ತೇ? ನಿನ್ನ ಕಷ್ಟಗಳೂ ಕ್ಷಣಿಕವಾದವು. ಎಲ್ಲ ಸಮಸ್ಯೆಗೂ ಪರಿಹಾರವಿರುತ್ತದೆ. ಸಮಚಿತ್ತದ ಬದುಕಿಗೆ ಇದಕ್ಕಿಂತ ಬೇರೆ ಪಾಠ ಬೇಕೇ ನಿನಗೆ?" ಬದುಕೇ ಕ್ಷಣಿಕ ಎಂದ ಮೇಲೆ ಕಷ್ಟ-ಸುಖಗಳು ಶಾಶ್ವತವೇ? ಜೀವನ ಸುಖಕರವಾಗಿದ್ದಾಗ ಅದನ್ನು ಅನುಭವಿಸಬೇಕು. ಹಾಗೆಯೇ ಕಷ್ಟಗಳು ಎದುರಾದಾಗ ಭರವಸೆ ಕಳೆದುಕೊಳ್ಳದೆ ಸಮಾಧಾನ ಹೊಂದಬೇಕು.👍💐💐💐

ಆಧಾರ : ಭೋದಿ ವೃಕ್ಷ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು