Wednesday, October 16, 2024

 ಕಥೆ-550

ಸೋಮಾರಿತನ ನಮ್ಮ ಶತ್ರು

ಒಬ್ಬ ಯುವ ವಿದ್ಯಾರ್ಥಿ ಯಾವಾಗಲೂ ಮನೆಯಲ್ಲಿ ಮಲಗುತ್ತಿದ್ದ. ಅವನಿಗೆ ಯಾವುದರ ಚಿಂತೆಯೂ ಇರಲಿಲ್ಲ. ಹಸಿವಾದಾಗ ಎದ್ದು ಒಂದಷ್ಟು ತಿಂದು ಮತ್ತೆ ಮಲಗೋದಷ್ಟೆ. ಒಮ್ಮೆ ಅವನ ತಂದೆಗೆ ಅವನ ವರ್ತನೆಯಿಂದ ಕಿರಿಕಿರಿ ತಡೆಯಲಾಗಲಿಲ್ಲ, ನೀನು ಹೀಗೆ ಮಲಗಿದ್ದರೇ ಓದೋದು ಹೇಗೆ ಮುಂದೆ ಪರೀಕ್ಷೆ ಹೇಗೆ ಬರೆಯುತ್ತೀಯಾ? 

ಓದಿ ಏನ್ ಮಾಡಬೇಕು ? ಪರೀಕ್ಷೆ ಬರೆದು ಏನ್ ಮಾಡಬೇಕು ? ಅಂತಾನೆ


ಹಿಂಗಾದ್ರು ಮುಂದೆ ಜೀವನ ಹ್ಯಾಂಗ ನಡೆಸುತ್ತಿ? ಎಂದು ಕೂಗಾಡಿದ.

ಜೀವನ ಮಾಡಿ ಏನ್ ಮಾಡಬೇಕು? ಅಂತಾನೆ


ಆಗ ಅಪ್ಪ, ಇಷ್ಟು ದಿನ ನಿನ್ನನ್ನು ಮಗ ಎಂದು ಮುದ್ದಿಸಿದ್ದು ನನ್ನದೇ ತಪ್ಪು. ಇವತ್ತಿಂದ ಎದ್ದು ಹೊಲಕ್ಕೆ ಹೋಗು ಅಂದ.

ಜಮೀನಿಗೆ ಹೋಗಿ ಏನು ಮಾಡಬೇಕು? ಅಂತಾನೆ..


ಇವತ್ತು ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವ ಬಹಳಷ್ಟು ಪಾಲಕರ ಪರಿಸ್ಥಿತಿ ಇದು.. ಇತ್ತ ಓದಿ ಉದ್ಯೋಗ ಪಡೆಯದೇ, ಅತ್ತ ಸಾಂಪ್ರದಾಯಿಕ ಕೃಷಿ/ಇತರೆ ಕೆಲಸಕ್ಕೂ ಬಾರದೆ, ಸಾಕಷ್ಟು ಉದ್ಯೋಗಗಳಿದ್ದರೂ ನಿರುದ್ಯೋಗಿಯಾಗಿ, ದಂಡಪಿಂಡಗಳಾಗಿ, ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ಮಕ್ಕಳನ್ನು ಮುದ್ದಾಗಿ ಬೆಳೆಸುವುದರಿಂದ ಸೋಮಾರಿಗಳಾಗಿ ಬೆಳೆಯುತ್ತಿವೆ..

ಚಿಕ್ಕಂದಿನಲ್ಲಿ ನಾವು ಮಕ್ಕಳಿಗೆ ಅವರ ಕರ್ತವ್ಯ ಪ್ರಜ್ಞೆ, ಕಷ್ಟದ ಅನುಭವ, ಮೌಲ್ಯಗಳನ್ನು ಬೆಳೆಸಲೇಬೇಕಿದೆ.. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?.. 


ಇವತ್ತು ಮಕ್ಕಳು ಸಹ ಅರಿತುಕೊಳ್ಳಬೇಕಾದುದೇನೆಂದರೆ ಮನುಷ್ಯನ ಶತ್ರು ಹೊರಗಿನವನಲ್ಲ, ನಮ್ಮೊಳಗಿನ ಸೋಮಾರಿತನವೇ ನಮ್ಮ ಶತ್ರು. ಮನುಷ್ಯ ಸದಾ ಉತ್ಸಾಹ, ಕ್ರಿಯಾಶೀಲನಾಗಿರಬೇಕು. ಏನಾದರೂ ಕೆಲಸ ಮಾಡುತ್ತಲೇ ಇರಬೇಕು. ಆಗ ನಾವು ಶಾಂತಿ ಮತ್ತು ಸಂತೋಷವನ್ನು ಪಡೆಯುತ್ತೇವೆ. ಆ ಕೆಲಸದಿಂದ ನಮಗೆ ಯಶಸ್ಸು ಸಿಗುತ್ತದೆ, ಏನೂ ಮಾಡದೆ ಸುಮ್ಮನೆ ಕುಳಿತರೆ ಸೋಮಾರಿತನವೇ ಬೆನ್ನೆಲುಬಾಗಿ ನಿಲ್ಲುತ್ತದೆ. ಕೊನೆಗೆ ಜೀವನ ದುಸ್ತರವಾಗುತ್ತದೆ. ಸೋಮಾರಿತನ ಬಿಟ್ಟು, ನಮ್ಮ ಪ್ರಯತ್ನದಿಂದ ಪರಮಾತ್ಮನನ್ನು(ಯಶಸ್ಸು) ಕಾಣಬೇಕು..

Shankargouda Basapur

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು