DD National live Pariksha pe charche with PM
ಕಥೆ-662
ಬದಲಾವಣೆ ಆದಾಗ ಮಕ್ಕಳ ಪ್ರಗತಿ
ಇವತ್ತು ನಾವು ಮಕ್ಕಳನ್ನು ನಮ್ಮಿಷ್ಟದಂತೆ ಬೆಳೆಸುವ ಪ್ರಯತ್ನವನ್ನು ಮಾಡುತ್ತೇವೆಯೇ ಹೊರತು ಅವರಲ್ಲಿರುವ ಆಸಕ್ತಿ ರಂಗ ಗುರುತಿಸುವುದಿಲ್ಲ.. ಮಕ್ಕಳನ್ನು ನಾವುಗಳು ನಮ್ಮ ಆಸಕ್ತಿರಂಗದಲ್ಲಿ ಬೆಳೆಸಲು ಪ್ರಯತ್ನಿಸುತ್ತೇವೆ.. ನಮ್ಮ ಆಸಕ್ತಿ ರಂಗವೂ ಮಕ್ಕಳ ಆಸಕ್ತಿ ರಂಗವು ಒಂದೇ ಆಗಿದ್ದಾಗ ಅದು ಉತ್ತಮ ಫಲಿತಾಂಶವನ್ನು ತಂದುಕೊಡುತ್ತದೆ.. ಅದು ವಿಭಿನ್ನವಾದಾಗ ಮಕ್ಕಳಿಗೆ ತೊಂದರೆ ಆಗುತ್ತದೆ.. ನಾವು ಮಕ್ಕಳ ಆಸಕ್ತಿರಂಗವನ್ನು ಅರಿತುಕೊಳ್ಳಬೇಕಿದೆ..
ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾದಾಗ, ಅದಕ್ಕೆ ಸಂಬಂಧಿಸಿದ ಸಾಧಕರ ಕಥೆ ಹೇಳಿದರೆ.. ಸೂಕ್ತ ಮಾರ್ಗದರ್ಶನ ಮಾಡಿದ್ದೆ ಆದರೆ ಮಕ್ಕಳ ಪ್ರಗತಿ ಅತ್ಯುತ್ತಮವಾಗಿರುತ್ತದೆ.. ಮಕ್ಕಳ ಆಸಕ್ತಿ ಇರುವ ವಿಷಯದಲ್ಲೇ ಸಾಧಕರ ಕಥೆಗಳನ್ನ ಆಯ್ಕೆ ಮಾಡಿಕೊಳ್ಳಬೇಕು. ಅತ್ಯಂತ ಎತ್ತರದ & ಶ್ರೇಷ್ಠವಾದ ಆದರ್ಶಗಳು ನಮ್ಮ ಮಕ್ಕಳ ಕೈಗೆ ಸಿಗುವಂತಾಗಬೇಕಾಗಿದೆ.. ಇದಕ್ಕಾಗಿ ನಮಗೆ ಮತ್ತು ಮಕ್ಕಳಿಗೆ ಗ್ರಂಥಾಲಯದ ಬಳಕೆ ಬೇಕಾಗಬಹುದು... ಸೂಕ್ತ ತರಬೇತಿ ಬೇಕಾಗಬಹುದು... ಓದಿನಲ್ಲಿ ಹಿಂದಿರುವ ವಿದ್ಯಾರ್ಥಿ ಬೇರೆ ಯಾವುದೋ ಒಂದು ರಂಗದಲ್ಲಿ ಮುಂದಿರುತ್ತಾನೆ.. ಅದನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತೇವೆ.. ಅತಿಯಾದ ಒತ್ತಡದಿಂದ ಹೇರುವ ಯಾವುದೇ ವಿಷಯಗಳು ಮಕ್ಕಳಲ್ಲಿ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ ಎಂಬುದು ರುಜುವತಾಗಿದೆ, ದೀರ್ಘಕಾಲಿಕ ಒತ್ತಡ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಬದಲಾವಣೆ ಆದಾಗ ಮಕ್ಕಳ ಪ್ರಗತಿಯಲ್ಲಿ ಬದಲಾವಣೆ ಸಾಧ್ಯ...
- Shankargouda Basapur
GHS Hiremyageri
No comments:
Post a Comment