Monday, November 24, 2025

 ಕಥೆ-953

“ಬೆಳಕಿನ ರಹಸ್ಯ” ಕಂಡ ಭಾರತೀಯ ವಿಜ್ಞಾನಿ


ಐದು ವರ್ಷದ ಬಾಲಕ ಒಂದು ದಿನ ತಾಯಿಗೆ ಕೇಳಿದ

ಬೆಳಕು ಬೇರೆ ಬೇರೆ ಕಡೆ, ಬೇರೆ ಬೇರೆ ಬಣ್ಣ ಬದಲಾಯಿಸೋದು ಯಾಕೆ?


ತಾಯಿ ನಗುತ ಅಂದುಕೊಂಡಳು, ಇವನಿಗಂತೂ ಉತ್ತರ ಬೇಕು....

ಮಗು ಇದರ ಬಗ್ಗೆ ಅಷ್ಟು ವಿಚಾರ ಮಾಡಿಲ್ಲ, ನೀನಂತೂ ನದಿಯ ನೀಲಿ ಬಣ್ಣ, ಆಕಾಶ ನೀಲಿ, ಈ ಎಲ್ಲದರ ಮೂಲವನ್ನು ಹುಡುಕಲು ಪ್ರೇರಣೆ ನೀಡಿದರು.


ಅವನು ಕಾಲೇಜು ಸೇರಿದ ನಂತರ, ಕಾಲೇಜಿನಲ್ಲಿ ಪ್ರೊಫೆಸರ್‌ಗಳಿಗೆ ಪ್ರಶ್ನೆ ಕೇಳುತ್ತಿದ್ದ... “ಹೊಸ ಪ್ರಶ್ನೆ ಕೇಳುವುದನ್ನೇ ವಿಜ್ಞಾನಿಗಳು ಮುಚ್ಚಿಟ್ಟಿದ್ದಾರೆ?” ಎಂದು ಎನ್ನಿಸುತ್ತಿತ್ತು ಅವನಿಗೆ....


ಅವನಲ್ಲಿರುವ ಕುತೂಹಲ ಪ್ರಯೋಗಗಳಿಗೆ ಹಾದಿ ಮಾಡಿತು, ಒಂದು ದಿನ, ಅ ಬೆಳಕು ಜಲದೊಳಗೆ ಹೋದಾಗ ಬಣ್ಣ ಬದಲಾಗುವುದನ್ನು ಗಮನಿಸಿದ. ಸ್ವಂತ ಉಪಕರಣ ತಯಾರಿಸಿ, ಸಾವಿರಾರು ಪ್ರಯೋಗ ಮಾಡಿ ಅಂತಿಮವಾಗಿ “ಬೆಳಕಿನ ಚದುರುವಿಕೆ” ಸಿದ್ಧಾಂತವನ್ನು ಕಂಡುಹಿಡಿದ. ಅವರೇ ಸರ್ ಸಿ ವಿ ರಾಮನ್..


ಈ ಆವಿಷ್ಕಾರವೇ “ರಾಮನ್ ಪರಿಣಾಮ” ವಿಶ್ವ ನಂಬಲಾರದ್ದು 

ಭಾರತದ ಒಬ್ಬ ವಿಜ್ಞಾನಿ, ಅದು ಕೂಡ ತನ್ನದೇ ಲ್ಯಾಬ್‌ನಲ್ಲಿ,

ವಿಶ್ವವಿಜ್ಞಾನದ ಪುಸ್ತಕವನ್ನು ಬದಲಿಸಿದ್ದ!


1930ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆಯುವಾಗ

ರಾಮನ್ ಹೇಳಿದರು:

“ವಿಜ್ಞಾನ ಯಾವುದೋ ದೊಡ್ಡ ಪ್ರಯೋಗಾಲಯದಲ್ಲೇ ಹುಟ್ಟುವುದಿಲ್ಲ.

ಕುತೂಹಲ ಇರುವ ಮನಸ್ಸಿನಲ್ಲಿ ಹುಟ್ಟುತ್ತದೆ.”


ಕುತೂಹಲ ಮತ್ತು ಕಲ್ಪನೆಗಳು ವಿಜ್ಞಾನ ಸಂಶೋಧನೆಗೆ ತಳಹದಿ ಇದ್ದಂತೆ... ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳು ಮೂಡಿದಾಗ ಮತ್ತು ಕುತೂಹಲ ಮತ್ತು ನವೀನ ಕಲ್ಪನೆಗಳನ್ನು ಹೊಂದಿದ ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಸಿ ವಿ ರಾಮನ್ ಅವರು ಮಾದರಿಯಾಗುತ್ತಾರೆ...

-ಶ್ರೀ ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು