ಕಥೆ-629
ಎಲ್ಲವನ್ನ ಪ್ರಕೃತಿ ನಮಗೆ ಕೊಟ್ಟಿದೆ.
ಭೂಮಿಯಲ್ಲಿ ನಾವು ಸುಂದರವಾಗಿ ಬದುಕೋದಕ್ಕೆ ಏನು ಬೇಕೋ ಎಲ್ಲವನ್ನ ಪ್ರಕೃತಿ ನಮಗೆ ಕೊಟ್ಟಿದೆ. ಉಸಿರಾಡಲು ಗಾಳಿ, ಬೆಚ್ಚನೆಯ ಬೆಳಕು, ಕುಡಿಯಲು ನೀರು, ತಿನ್ನಲು ಅನ್ನ, ಎಲ್ಲವನ್ನೂ...
ಇಲ್ಲಿ ಬದುಕೋಕೆ ಬೇಕಿರುವುದು ಒಂದು ಸಣ್ಣ ವಿವೇಚನೆಯಷ್ಟೇ, ಅತೀ ಬುದ್ದಿವಂತಿಕೆಯಲ್ಲ!
ಪ್ರಾಣಿ ಪಕ್ಷಿಗಳು ಪ್ರಕೃತಿ ಕೊಟ್ಟಿರೋದನ್ನ ಪ್ರಕೃತಿಗೂ ಹಾನಿಯಾಗದಂತೆ ಬಳಸಿ ಚಂದವಾಗಿ ಬದುಕಿ ಸಾವಿನಲ್ಲೂ ಸಾರ್ಥಕತೆಯನ್ನ ಪಡೆಯತ್ವೆ, ಆದ್ರೆ ಮನುಷ್ಯ ಮಾತ್ರ ತನ್ನ ಕೂಡಿಡುವ ಬುದ್ದಿಯಿಂದ ಇಲ್ಲದ ಉಪಾಯಗಳನ್ನ ಬಳಸಿ ಪ್ರಕೃತಿಯನ್ನೂ ಹಾಳು ಮಾಡಿ ತನ್ನ ವಿನಾಶಕ್ಕೂ ಕಾರಣ ಆಗ್ತಾನೆ.
ಪ್ರಾಣಿ ಪಕ್ಷಿಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಷ್ಟು ಪುಟ್ಟ ಗೂಡೋ, ಗುಹೆಯೇ ಸಾಕು. ಆದರೆ ಮನುಷ್ಯನಿಗೆ ಮಾತ್ರ ಐಷಾರಾಮಿ ಮನೆ ಬೇಕು, ಅಲ್ಲಿ ಬೆವರಬಾರದು, ಚಳಿಯೂ ಆಗಬಾರದು, ಎಸಿ, ಕೂಲರ್, ಹೀಟರ್ ಎಲ್ಲವೂ ಬೇಕು
ಈ ಬೇಕು, ಬೇಕುಗಳ ನಡುವೆ ನಿಜಕ್ಕೂ ನಮಗೆ ಬೇಕಿರುವುದು ಏನು? ನೆಮ್ಮದಿ
ಬದುಕು ಅಂದ್ರೆ ಇಷ್ಟೇ, ಯಾರಿಗೂ ತೊಂದರೆ ನೀಡದೆ, ನಮಗೂ ನಮ್ಮ ಆತ್ಮಕ್ಕೂ ಹೆಚ್ಚು ತೊಂದರೆ ಮಾಡಿಕೊಳ್ಳದೆ, ನಮ್ಮ ಅಗತ್ಯಗಳಿಗೆ ಬೇಕಿರುವುದನ್ನ ಪಡೆದುಕೊಂಡು ಚಂದವಾಗಿ ಬದುಕುವುದೇ ಜೀವನ..
ಸರಳತೆಯಿಂದ ನೆಮ್ಮದಿಯನ್ನ ಅರಸಿದರೆ ಖಂಡಿತ ಅದು ನಮಗೆ ಸಿಗಬಹುದು.
ಭೂಮಿಯಲ್ಲಿ ನಾವು ಅತಿಥಿಗಳಷ್ಟೇ! ವಾರಸ್ಸುದಾರರಲ್ಲ!
ಪ್ರಕೃತಿಯನ್ನ ಅದರಂತೆ ಇರಲು ಬಿಟ್ಟು ಬಿಡೋಣ. ಗಿಡ ಮರ ಪರಿಸರ ಉಳಿಸಲು ಕಿಂಚಿತ್ತಾದರೂ
ಮನಸ್ಸು ಮಾಡೋಣ......
ಕೃಪೆ ನೆಟ್
No comments:
Post a Comment