ಕಥೆ-1047
ಅವಮಾನದಿಂದ IPS ಅಧಿಕಾರಿಯಾದ ಕಥೆ..
2013 ರಲ್ಲಿ, ಅವರು ಮರೈನ್ ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇರಿದರು ಸಾವಿರಾರು ಸಿಬ್ಬಂದಿಗಳಲ್ಲಿ ಅವರೂ ಒಬ್ಬರಾಗಿದ್ದರು.
2018 ರಲ್ಲಿ, ತಾಲೀಮಿಗೆ (drill) ತಡವಾಗಿ ಬಂದ ಕಾರಣಕ್ಕಾಗಿ ಅವರ ಮೇಲಧಿಕಾರಿ ಎಲ್ಲರ ಮುಂದೆ ಇವರನ್ನು ಹೀಗಳೆದರು.
"ಈ ಸಾಹೇಬರು ಐಪಿಎಸ್ ಅಥವಾ ಐಎಎಸ್ ಅಧಿಕಾರಿ ಆಗ್ತಾರಂತೆ!" ಎಂದು ಎಲ್ಲರ ಮುಂದೆ ಅವಮಾನ ಮಾಡಿದರು..
ಅವರನ್ನು ತಾಲೀಮಿನಿಂದ ಹೊರಹಾಕಿ, ಮುಖಕ್ಕೆ ಹೊಡೆದಂತೆ ಹೀಗೆ ಹೇಳಿದರು.
"ಕನಸು ಕಾಣಬೇಡ. ನೀನು ಕೇವಲ ಒಬ್ಬ #ಕಾನ್ಸ್ಟೇಬಲ್ ಅಷ್ಟೇ."
ಆ ಅವಮಾನ ಎಲ್ಲವನ್ನೂ ಬದಲಿಸಿತು.
ಅದೇ ದಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅದು ಕೋಪದಿಂದಲ್ಲ — ಬದಲಿಗೆ ಒಂದು ದೃಢ ಸಂಕಲ್ಪದೊಂದಿಗೆ. ಅವರು ನಿರ್ಧರಿಸಿದರು; ಮರಳಿ ಬಂದರೆ ಕಾನ್ಸ್ಟೇಬಲ್ ಆಗಿ ಅಲ್ಲ, ಐಪಿಎಸ್ ಅಧಿಕಾರಿಯಾಗಿಯೇ ಬರುತ್ತೇನೆ ಎಂದು.
ಯುಪಿಎಸ್ಸಿ ಪಯಣ ಸುಲಭವಾಗಿರಲಿಲ್ಲ. ಹಲವು ಬಾರಿ ವಿಫಲರಾದರು. ಆದರೆ ಅವರ ಗುರಿ ಮಾತ್ರ ಬದಲಾಗಲಿಲ್ಲ.
ಕೊನೆಗೆ ತಮ್ಮ ಐದನೇ ಪ್ರಯತ್ನದಲ್ಲಿ, ಅಖಿಲ ಭಾರತ ಮಟ್ಟದಲ್ಲಿ 350ನೇ ಶ್ರೇಣಿ (AIR 350) ಪಡೆದರು.
ಅವರು ಐಪಿಎಸ್ ಅಧಿಕಾರಿಯಾದರು.
"ನೀನು ಬರಿ ಕಾನ್ಸ್ಟೇಬಲ್" ಎಂಬ ಹೀಯಾಳಿಕೆಯಿಂದ ಹಿಡಿದು, ಹೆಗಲ ಮೇಲೆ ಐಪಿಎಸ್ ನಕ್ಷತ್ರಗಳನ್ನು ಗಳಿಸುವವರೆಗೆ — ಇದು ಅವರ ಅದಮ್ಯ ಛಲದ ಇದು ಉದಯ್ ಕೃಷ್ಣ ರೆಡ್ಡಿ ಅವರ ಕಥೆ.
ಯಾರಾದರೂ ನಮ್ಮ ಮೇಲೆ ಕಲ್ಲು ಎಸೆದರೆ, ಆ ಕಲ್ಲುಗಳನ್ನು ಬಳಸಿಕೊಂಡು ಒಂದು ಸಾಮ್ರಾಜ್ಯವನ್ನೇ ನಿರ್ಮಿಸಿ.
ಯಾವ ಕನಸೂ ಕೂಡ ದೊಡ್ಡದಲ್ಲ... 🙏
✍️ :: ಸಿದ್ದೇಶ್
No comments:
Post a Comment