Tuesday, July 9, 2024

 ಕಥೆ-451

ನಿಶ್ಚಿಂತೆ

ಇಬ್ಬರು ಸೋದರರು ವ್ಯಾಪಾರಕ್ಕೆಂದು ಹೊರಟಿದ್ದರು. ಅವರ ವಾಹನ ಎರಡು ಕತ್ತೆಗಳು. ಕೆಲವು ದಿನ ವ್ಯಾಪಾರ ಮಾಡಿ ಅಪಾರ ಸಂಪತ್ತಿನೊಂದಿಗೆ ತಮ್ಮ ಗ್ರಾಮದತ್ತ ನಡೆದಿದ್ದರು. ಸಂಪತ್ತನ್ನೆಲ್ಲ ಗಂಟು ಕಟ್ಟಿ ಕತ್ತೆಗಳ ಮೇಲೆ ಹೇರಿದ್ದರು. ಮಾರ್ಗ ಮಧ್ಯದಲ್ಲಿ ಆಯಾಸವಾಗಿ ಒಂದು ಮರದಡಿ ಮಲಗಿದರು. ಗಂಟುಗಳನ್ನು ಹತ್ತಿರದಲ್ಲಿ ಇಟ್ಟುಕೊಂಡಿದ್ದರು. ಕತ್ತೆಗಳು ಅಲ್ಲಿಯೇ ಮೇಯುತ್ತಲಿದ್ದವು. ಅಣ್ಣನಿಗೆ ಮೊದಲು ಎಚ್ಚರವಾಯಿತು ತಮ್ಮನು ಇನ್ನೂ ಗಾಢ ನಿದ್ರೆಯಲ್ಲಿದ್ದ. ತಕ್ಷಣ ಅಣ್ಣನಿಗೆ ಏನೋ ಹೊಳೆಯಿತು. ತಮ್ಮನ ಗಂಟಿನಲ್ಲಿದ್ದ ಒಂದಿಷ್ಟು ಹಣವನ್ನು ಎತ್ತಿಕೊಳ್ಳಲು ತೊಡಗಿದ. ಅಷ್ಟರಲ್ಲಿ ತಮ್ಮನಿಗೆ ಎಚ್ಚರಿಕೆಯಾಯಿತು. ಅಣ್ಣನು ಸಂಪತ್ತು ಕದಿಯುತ್ತಿರುವುದನ್ನು ಕಂಡು ಕುಪಿತನಾದ. ಒಡ ಹುಟ್ಟಿದ ಅಣ್ಣ ತಮ್ಮರೆಂಬುದನ್ನು ಮರೆತು ಇಬ್ಬರೂ ಬಡಿದಾಡಿ ಅಸುನೀಗಿದರು.

ಕತ್ತೆಗಳು ಮಾತ್ರ ನಿರ್ಲಿಪ್ತವಾಗಿ ಒಣಗಿದ ಹುಲ್ಲು ಕಡ್ಡಿಗಳನ್ನು ಮೇಯುತ್ತಿದ್ದವು. ಮರದ ಮೇಲಿದ್ದ ಗಿಳಿಯು ಕತ್ತೆಗಳಿಗೆ ಕೇಳಿತು - "ನಿಮ್ಮ ಮಾಲಿಕರು ಹಣಕ್ಕಾಗಿ ಪರಸ್ಪರ ಬಡಿದಾಡಿ ಮಡಿದರೂ ನೀವು ನಿಶ್ಚಿಂತರಾಗಿರುವಿರಲ್ಲ ಹೇಗೆ ?" ಕತ್ತೆಗಳು ಹೇಳಿದವು "ಏಕೆಂದರೆ ನಾವು ಬುದ್ಧಿಹೀನ ಪ್ರಾಣಿಗಳು? ಅದಕ್ಕೆ ನಾವು ನಿಶ್ಚಿಂತರು ! ಮನುಷ್ಯ ಪ್ರಾಣಿ ಬಹಳ ಬುದ್ಧಿವಂತ, ಆದ್ದರಿಂದ ಅವನು ಹಾಗೆ ಸಂಪತ್ತಿಗಾಗಿ ಬಡಿದಾಡಿ ಪ್ರಾಣ ಕಳೆದುಕೊಳ್ಳುತ್ತಾನೆ. ಕೃಪೆ :ನೆಟ್.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು