Thursday, July 11, 2024

11. 22 33. 44

 ಕಥೆ-453

ಮಾಯೆ

ಒಬ್ಬ ಮನುಷ್ಯನು ದೇಹ ಬಿಟ್ಟಿದ್ದ. ಶವ ಸಂಸ್ಕಾರಕ್ಕೆ ಅವನ ಗೆಳೆಯನು ಸ್ಮಶಾನಕ್ಕೆ ಹೋಗಿದ್ದ. ಅಲ್ಲಿ ತನ್ನ ಗೆಳೆಯನ ದೇಹವು ಅಗ್ನಿಗೆ ಆಹುತಿಯಾಗುವುದನ್ನು ಕಣ್ಣಾರೆ ಕಂಡ. ಜೀವನವು ಎಷ್ಟು ಅಸ್ಥಿರ, ನಶ್ವರ ಎನಿಸಿತು. 'ಮನುಷ್ಯನು ಈ ನಶ್ವರ ಜೀವನಕ್ಕಾಗಿ, ಸಂಸ್ಕಾರಕ್ಕಾಗಿ ಆಶೆಪಡಬಾರದು, ಹೋರಾಡಬಾರದು !' ಎಂದು ಅಲ್ಲಿರುವವರಿಗೆ ಈತ ಹೇಳಿದ. ಜನರು ಈತನ ಉಪದೇಶಕ್ಕೆ ಮೌನವಾಗಿ ಸಮ್ಮತಿಸಿ ಮನೆಗೆ ಹೊರಟರು. ಅಷ್ಟರಲ್ಲಿ ಯಾರೋ ಈತನ ಕಾಲಮೇಲೆ ಕಾಲಿಟ್ಟಿದ್ದರಿಂದ ಇವನ ಹಳೆ ಚಪ್ಪಲಿ ಹರಿಯಿತು. 'ಕಣ್ಣು ಕಾಣುವುದಿಲ್ಲವೆ ? ಹೇಗೆ ನಡೆಯುತ್ತೀರಿ ?' ಎಂದು ಅವರೊಂದಿಗೆ ಈತ ವಾದವಿವಾದಕ್ಕೆ ಇಳಿದು ಹೋರಾಡತೊಡಗಿದ . ಅಲ್ಲಿದ್ದ ಜನರೆಲ್ಲ ಈತನಿಗೆ ಸಮಾಧಾನ ಹೇಳಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಒಂದು ಕ್ಷಣದ ಹಿಂದೆಯೇ 'ಮಾನವ ಜೀವನ ಅಸ್ಥಿರ-ನಶ್ವರ' ಎಂದು ಹೇಳಿದವನೇ ತನ್ನ ಹಳೆಯ ಚಪ್ಪಲಿಗಳಿಗಾಗಿ ವಾದಿಸಿದ ! ಇದೇ ಮಾಯೆ, ಮೋಹ!. ಕೃಪೆ: ಸಿದ್ದೇಶ್ವರ ಸ್ವಾಮೀಜಿಗಳು.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು