Tuesday, November 28, 2023

Sound vibrates light 

How ear works

Wave length time period

Reflection of wave

Sonar

ಕಥೆ-227.. ಪಂಚರ್ ಹಾಕುತ್ತಿದ್ದವನು IAS ಆಫೀಸರ್ 

ಸೈಕಲ್ ಶಾಪ್ ನಲ್ಲಿ ಪಂಚರ್ ಹಾಕುತ್ತಿದ್ದವನು IAS ಆಫೀಸರ್ ಆದ ಸ್ಪೂರ್ತಿದಾಯಕ ಕತೆ!!!*.                           

ನಾವು ಯಾವುದೇ ಒಬ್ಬ ಯಶಸ್ವಿ ವ್ಯಕ್ತಿಯನ್ನು ನೋಡಿದಾಗ ಅವರು ತುಂಬಾ ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅನ್ಕೋತೀವಿ ಆದ್ರೆ ಯಶಸ್ವಿ ವ್ಯಕ್ತಿಗಳಲ್ಲ್ಲಿಬಹುತೇಕರು ಅವರ ಜೀವನದಲ್ಲಿ ಪಟ್ಟ ಕಷ್ಟವನ್ನು ಅರ್ಥೈಸಿಕೊಳ್ಳೋದಿಲ್ಲ.ಯಶಸ್ಸನ್ನು ಅನುಭವಿಸಿದ ಹೆಚ್ಚಿನ ಜನರು ಸುಖಕ್ಕಿಂತ ಕಷ್ಟವನ್ನೇ ಹೆಚ್ಚಾಗಿ ಅನುಭವಿಸಿರುತ್ತಾರೆ. ಐಎಎಸ್ ಅಧಿಕಾರಿಯಾದ ವರುಣ್ ಬರಾನ್ವಾಲ್ ಅವರ ಕಥೆ ಇದೇ ರೀತಿಯದ್ದು.ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ ಹುಡುಗನ ಸುತ್ತಲಿನ ಕೆಲವು ಜನರ ಔದಾರ್ಯ ಅಂತಿಮವಾಗಿ ಅವರು ಐಎಎಸ್ ಅಧಿಕಾರಿಯಾಗಲು ಕಾರಣವಾಯಿತು.ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ಎಂಬ ಸಣ್ಣ ಪಟ್ಟಣದ ಬಾಲಕ ವರುಣ್ ಬರಾನ್ವಾಲ್, ಇವರು ಯಾವಾಗಲೂ ತಾನು ಡಾಕ್ಟರ್ ಆಗಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದ.ಸೈಕಲ್ ಚಕ್ರಗಳನ್ನು ರಿಪೇರಿ ಮಾಡುವ ಪಂಚರ್ ಅಂಗಡಿಯನ್ನು ನಡೆಸುತ್ತಿದ್ದ ಅವರ ತಂದೆ, ವರುಣ್ ಮತ್ತು ಅವರ ಸಹೋದರಿಗೆ ಉತ್ತಮ ಜೀವನ ನೀಡಲು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು.ಆದರೆ 2006 ರ ಮಾರ್ಚ್ ನಲ್ಲಿ ವರುಣ್ ನ 10 ನೇ ತರಗತಿ ಪರೀಕ್ಷೆಯ ನಾಲ್ಕು ದಿನಗಳ ನಂತರ, ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಆಸ್ಪತ್ರೆಯ ಬಿಲ್ ಗಳು ಅವರ ಕುಟುಂಬವನ್ನು ದೊಡ್ಡಮಟ್ಟದ ಸಾಲದಲ್ಲಿ ಸಿಲುಕಿಸಿದ್ದವು ಇದರಿಂದ ತಾನು ಓದುವುದನ್ನು ನಿಲ್ಲಿಸಬೇಕು ಎಂಬ ದೊಡ್ಡ ನಿರ್ಧಾರವನ್ನು ವರುಣ್ ತೆಗೆದುಕೊಂಡರು.10 ನೇ ತರಗತಿಯ ಫಲಿತಾಂಶದಲ್ಲಿ ಇಡೀ ನಗರಕ್ಕೆ ಎರಡನೇ ಸ್ಥಾನ ಗಳಿಸಿದರೂ ವರುಣ್ ಓದುವುದನ್ನು ನಿಲ್ಲಿಸಿ ಸೈಕಲ್ ಶಾಪ್ ನಲ್ಲಿ ಪಂಚರ್ ಕೆಲಸವನ್ನು ಮಾಡುತ್ತಿದ್ದನು.ಅವನ ಸ್ನೇಹಿತರು ಮತ್ತು ಶಿಕ್ಷಕರು ಆತನನ್ನು ಸಂತೋಷಪಡಿಸಿದರು ಮತ್ತು ಭವಿಷ್ಯಕ್ಕಾಗಿ ಅವನನ್ನು ಪ್ರೇರೇಪಿಸಿದರು.ಈ ಹಂತದಲ್ಲಿ, ಅವರ ತಾಯಿ ಮಧ್ಯಪ್ರವೇಶಿಸಿದರು.“ನನ್ನ ತಾಯಿ ಈ ಅಂಗಡಿಯನ್ನು ನಡೆಸುತ್ತಾರೆ ಮತ್ತು ನಾನು ಅಧ್ಯಯನ ಮಾಡುತ್ತೇನೆ ಎಂದು ನಿರ್ಧರಿಸಲಾಯಿತು. ಹಾಗಾಗಿ ಹತ್ತಿರದ ಕಾಲೇಜಿನಿಂದ ನನಗೆ ಒಂದು ಅರ್ಜಿ ಸಿಕ್ಕಿತು ಆದರೆ ಪ್ರವೇಶ ಶುಲ್ಕ ಕಟ್ಟಲಾಗದ ಕಾರಣ ಓದುವ ಯೋಚನೆಯನ್ನು ಕೈಬಿಟ್ಟೆ”ಎಂದು ಅವರು ಹೇಳುತ್ತಾರೆ.ಕೆಲವು ದಿನಗಳ ನಂತರ, ವರುಣ್ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ತಂದೆಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಕಾಂಪ್ಲಿ, ತನ್ನ ಭವಿಷ್ಯದ ಬಗ್ಗೆ ವರುಣ್ಗೆ ಕೇಳಿದರು ಆಗ ವರುಣ್ ಹಣಕಾಸಿನ ಸಮಸ್ಯೆಯಿಂದಾಗಿ ತನ್ನ ವ್ಯಾಸಂಗವನ್ನು ತೊರೆದಿದ್ದಾರೆಂದು ಹೇಳಿದ್ದರು.ಇದನ್ನು ಕೇಳಿದ ಡಾ.ಕಂಪ್ಲಿ ಕಾಲೇಜಿನ ಪ್ರವೇಶ ಶುಲ್ಕವನ್ನು ಕೊಟ್ಟು ಕಾಲೇಜಿಗೆ ಸೇರಿಕೋ ಎಂದು ಹೇಳಿದರು.ಮುಂದಿನ ಎರಡು ವರ್ಷಗಳು ವರುಣ್ ಗೆ ನಿಜವಾಗಿಯೂ ಕಷ್ಟಕರವಾಗಿತ್ತು. ತನ್ನ ಕಾಲೇಜಿನ ಕನಿಷ್ಠ ಶುಲ್ಕವಾದ ತಿಂಗಳಿಗೆ 650 ರೂ.ವನ್ನು ಕಟ್ಟಲು ತನ್ನ ಕುಟುಂಬಕ್ಕೆ ಆಗುತ್ತಿರಲಿಲ್ಲ.ಈ ವಿಷಯ ಕಾಲೇಜಿನ ಉಪನ್ಯಾಸಕರಿಗೆ ತಿಳಿದಾಗ ವರುಣ್ ಗೆ ಶುಲ್ಕ ಕಟ್ಟಲು ಸಹಾಯ ಮಾಡುತ್ತಿದ್ದರು. ಆ ಎರಡು ವರ್ಷ ವರುಣ್ ತುಂಬಾ ಕಷ್ಟ ಪಟ್ಟು ಓದಿ 12 ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು.12ತರಗತಿಯನ್ನು ಉತ್ತೀರ್ಣನಾದ ನಂತರ ಅವ್ರು ಮೆಡಿಕಲ್ ಸೇರಿಕೊಳ್ಳಲು ಆಸೆಪಟ್ಟರು ಆದರೆ ಮತ್ತದೇ ಹಣದ ಸಮಸ್ಯೆಯಿಂದ ಅವರು ಇಂಜಿನಿಯರಿಂಗ್ ತೆಗೆದುಕೊಳ್ಳುವಂತೆ ಆಯಿತು.ಮೊದಲ ವರ್ಷದ ಇಂಜಿನೀಯರಿಂಗ್ ಶುಲ್ಕವನ್ನು ಪಾವತಿ ಮಾಡಲು ಕುಟುಂಬವು ಉಳಿಸಿದ ಎಲ್ಲ ಹಣವನ್ನು ಒಟ್ಟಿಗೆ ಸೇರಿಸಿ ಮತ್ತು ತಮ್ಮ ಹಳೆಯ ಭೂಭಾಗವನ್ನು ಮಾರಾಟಮಾಡಬೇಕಾಯಿತು. ಮೊದಲ ವರ್ಷ ಅವರು ಎಂದಿನಂತೆ ಆಗ್ರ ಸ್ಥಾನ ಗಳಿಸಿದರು ಅವರು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಿದರು ಅದು ಎರಡನೇ ವರ್ಷದಲ್ಲಿ ಅವರ ಕೈ ಸೇರಿತು. ಬಂದ ವಿದ್ಯಾರ್ಥಿವೇತನ ಮೂರನೇ ವರ್ಷ ಮತ್ತು ಅಂತಿಮ ವರ್ಷದ ಶುಲ್ಕವನ್ನು ಪಾವತಿಸಲು ಸಹಾಯವಾಯಿತು.2012 ರಲ್ಲಿ, ವರುಣ್ ತನ್ನ ಅಂತಿಮ ವರ್ಷದಲ್ಲಿದ್ದಾಗ, ಅವರು ಬಹುರಾಷ್ಟ್ರೀಯ ಕಂಪನಿಯಿಂದ ಉದ್ಯೋಗಾವಕಾಶವನ್ನು ಪಡೆದರು. ಆದರೆ ವರುಣ್ ಅವರ ಜೀವನ ಬೇರೆ ಬೇರೆ ತಿರುವು ಪಡೆದುಕೊಂಡಿತು. ಜನ ಲೋಕಪಾಲ ಮಸೂದೆಗೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟವು ಅವರನ್ನು ಬದಲಾಯಿಸಿತು.2012 ರಲ್ಲಿ ಅವರು ಯುಪಿಎಸ್ಸಿ (IAS) ಪರೀಕ್ಷೆಗಳಿಗೆ ತಯಾರಾಗಲು ನಿರ್ಧರಿಸಿದರು. ಅವರ ಕೊಠಡಿ ಸಹಪಾಠಿ ಭೂಷಣ್ ಅವರು ತರಬೇತಿ ತರಗತಿಯನ್ನು ಪರಿಚಯಿಸಿದರು. ಅಲ್ಲಿ ಅವರು ಅವರ ಪರೀಕ್ಷೆಗಳಿಗೆ ಸಿದ್ಧರಾದರು.ಆದರೆ ಮತ್ತೊಮ್ಮೆ, ಅವರು ಯುಪಿಎಸ್ಸಿ (IAS) ಗಾಗಿ ತಯಾರಾಗಲು ಪುಸ್ತಕಗಳನ್ನು ಖರೀದಿಸಲು ಕಷ್ಟಪಟ್ಟರು ಒಮ್ಮೆ ರೈಲು ಪ್ರಯಾಣದಲ್ಲಿ ಅವರು ಓರ್ವ ಹಿರಿಯ ವ್ಯಕ್ತಿ ಹೋಪ್ ಎಂಬ NGO ದೊಂದಿಗೆ ತೊಡಗಿಸಿಕೊಂಡಿದ್ದರು. ಹೋಪ್ ರವರು ವರುಣ್ ಅಧ್ಯಯನ ಮಾಡಲು ಬೇಕಾದ ಪುಸ್ತಕಗಳನ್ನು ಪಡೆಯಲು ಸಹಾಯ ಮಾಡಿದರು.2014 ರ ಯುಪಿಎಸ್ಸಿ (IAS) ಪರೀಕ್ಷೆಯಲ್ಲಿ ವರುಣ್ ಬರಾನ್ವಾಲ್ ಅಂತಿಮವಾಗಿ ಅಖಿಲ ಭಾರತ IAS 32 ನೇ Rank ಪಡೆದುಕೊಂಡರು.ಈಗ ವರುಣ್ ಬರಾನ್ವಾಲ್ ಅವರನ್ನು ಗುಜರಾತ್‌ನ ಹಿಮತ್ನಗರ್ನಲ್ಲಿ ಸಹಾಯಕ ಕಲೆಕ್ಟರ್ ಪೋಸ್ಟಿಂಗ್ ಮಾಡಲಾಗಿದೆ. ಈಗ ವರುಣ್ ಅವರು ಕೇವಲ ತನ್ನ ಕುಟುಂಬದ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ಸಮಾಜದ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ..

ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ. ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಹಾಕಿ ಗುರಿಯ ಮೇಲೆ ಗಮನವಿರಲಿ ಅಡೆತಡೆಗಳ ಮೇಲಲ್ಲ.

ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.

ಈ ವರುಣ್ ಬರಾನ್ವಾಲ್ IAS

ಅವರ ಜೀವನದ ಎಲ್ಲಾ ಹಂತಗಳಲ್ಲೂ ಶಿಕ್ಷಣ ಪಡೆಯಲು ಮಾಡಿದ ಅವರ ಹೋರಾಟ ಮತ್ತು ನಿರ್ಣಯವು ಅನೇಕರಿಗೆ ಸ್ಪೂರ್ತಿಯಾಗಿದೆ.

 ಅವರು ನಮಗೂ ಮಾದರಿ..

👍💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು