ಕಥೆ-315
ಅವಕಾಶಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು.
ಹದ್ದುಗಳಿಗೆ ಒಂದು ವಿಶೇಷ ಶಕ್ತಿಯಿದೆಯಂತೆ. ಜೋರು ಮಳೆ, ಬಿರುಗಾಳಿ ಬೀಸುವ ಮುನ್ನ ಹದ್ದುಗಳಿಗೆ ಮುನ್ಸೂಚನೆ ಸಿಗುತ್ತದೆ. ಅದು ಪ್ರಾಣಿ-ಪಕ್ಷಿಗಳಿಗೆ ಪ್ರಕೃತಿ ನೀಡಿರುವ ವರದಾನ. ಉಳಿದೆಲ್ಲ ಸಣ್ಣಪುಟ್ಟ ಪಕ್ಷಿಗಳು ಆಗ ಹೆದರಿ ಗೂಡು ಸೇರಿಬಿಡುತ್ತವೆ. ಆದರೆ ಹದ್ದು ಎತ್ತರದ ಪ್ರದೇಶಕ್ಕೆ ಹಾರಿ ಹೋಗಿ ಕುಳಿತುಕೊಳ್ಳುತ್ತದೆ. ಗಾಳಿ ಬೀಸಿದಾಗ ಅದರ ಜತೆಗೇ ಹಾರಿ, ಆ ರಭಸದ ಸಹಾಯದಿಂದ ಮೋಡದ ಮಟ್ಟಕ್ಕಿಂತ ಎತ್ತರವಾಗಿ ಹಾರುತ್ತದಂತೆ. ಹದ್ದು ಹಾಗೆ ಹಾರುವುದು ಬಿರುಗಾಳಿಗೆ ಹೆದರಿಯಲ್ಲ. ಬದಲಿಗೆ ಗಾಳಿಯ ಸಹಾಯದಿಂದಲೇ ಅದು ಅಪಾಯದ ಮಟ್ಟಕ್ಕಿಂತ ಎತ್ತರಕ್ಕೆ ಹಾರುತ್ತದೆ. ಹಾಗೆಯೇ ಬದುಕಿನಲ್ಲಿ ಕಷ್ಟಗಳೆಂಬ ಬಿರುಗಾಳಿ ಬೀಸಿದಾಗ ಹೆದರಿ ಓಡಿ ಹೋಗುವ ಬದಲು, ಅದರಿಂದ ಪಾಠ ಕಲಿಯುವ, ಗಟ್ಟಿಯಾಗುವ ಅವಕಾಶಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು.
No comments:
Post a Comment