Sunday, April 28, 2024

 ಕಥೆ-379

ಶಾಂತಿಯಿಂದ ಜೀವಿಸುವುದೇ ಜೀವನದ ಪರಮೋದ್ದೇಶ

ಬಹಳ ಹಿಂದೆ ಮಹತ್ವಾಕಾಂಕ್ಷಿಯಾದ ರಾಜನೊಬ್ಬನಿದ್ದ. ಕೆಲವೊಮ್ಮೆ ಆತನ ಆಕಾಂಕ್ಷೆಗಳು ದುರಾಸೆಯ ಮಿತಿಯನ್ನೂ ಮೀರಿ ಬಿಡುತ್ತಿದ್ದವು. ಆತ ದಂಡಯಾತ್ರೆ ಮೂಲಕ ಸುತ್ತಲಿನ ಹತ್ತಾರು ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. ಆತನಿಗೊಬ್ಬ ಬುದ್ಧಿವಂತ, ಜ್ಞಾನಿಯೆನಿಸಿಕೊಂಡ ಮಹಾಮಂತ್ರಿಯಿದ್ದ. ಒಮ್ಮೆ ಆತ ರಾಜನನ್ನು ‘ಮಹಾರಾಜರೆ ನೀವು ಎಲ್ಲಿಯವರೆಗೆ ದಂಡಯಾತ್ರೆ ಕೈಗೊಳ್ಳುತ್ತಲೇ ಇರುತ್ತೀರಿ, ನಿಮ್ಮ ಗುರಿಯೇನು?’ ಎಂದು ಕೇಳಿದ. ಅದಕ್ಕೆ ರಾಜ ಹೇಳಿದ-‘ಇಡೀ ಏಷ್ಯಾ ನನ್ನ ಅಧೀನದೊಳಗೆ ಬರಬೇಕು’ ಎಂದ. ‘ಆಮೇಲೆ?’ ಎಂದು ಕೇಳಿದ ಮಂತ್ರಿ. ‘ನಂತರದಲ್ಲಿ ನಾನು ಅರೇಬಿಯಾದ ರಾಜನಾಗಬೇಕು’ ಎಂದ. ‘ಆಮೇಲೆ ಸುಮ್ಮನಾಗುತ್ತೀರೋ?’ ಎಂದು ಪ್ರಶ್ನಿಸಿದ ಮಂತ್ರಿ.

‘ಇಲ್ಲ, ಆಮೇಲೆ ಯುರೋಪ್, ಆಫ್ರಿಕಾ ಖಂಡಗಳ ಮೇಲೆ ದಂಡೆತ್ತಿ ಹೋಗುತ್ತೇನೆ. ನಂತರದಲ್ಲಿ ಇಡೀ ಪ್ರಪಂಚವನ್ನು ಜಯಿಸಿ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ’ ಎಂದ ಗರ್ವದಿಂದ. ‘ಆಮೇಲೆ?!’ ಎಂದ ಮಂತ್ರಿ. ಕುಪಿತನಾದ ರಾಜ ‘ಆಮೇಲೇನು ಉಳಿದಿರುತ್ತದೆ ಮಂತ್ರಿವರ್ಯರೆ. ನಾನು ವಿಶ್ರಾಂತಿಯಿಂದ, ಶಾಂತಿಯ ಜೀವನ ನಡೆಸುತ್ತೇನೆ’ ಎಂದ. ‘ಹಾಗಾದರೆ ಈಗೇಕೆ ನೀವು ಇಲ್ಲಿ ಶಾಂತಿಯಿಂದ, ಆರಾಮಾಗಿ ಜೀವಿಸಬಾರದು? ಶಾಂತಿಯಿಂದ ಜೀವಿಸುವುದೇ ಜೀವನದ ಪರಮೋದ್ದೇಶವಾದರೆ ಅದನ್ನು ಇಂದಿನಿಂದಲೂ ಮಾಡಬಹುದಲ್ಲವೆ. ಅದಕ್ಕಾಗಿ ಪ್ರಪಂಚವನ್ನು ಗೆಲ್ಲುವ, ಯಾರನ್ನೋ ಕೊಲ್ಲುವ ಅವಶ್ಯವಿದೆಯೇ?’ ಎಂದು ಕೇಳಿದ ಮಂತ್ರಿ. ರಾಜನಲ್ಲಿ ಆ ಪ್ರಶ್ನೆಗೆ ಉತ್ತರ ಉಳಿದಿರಲಿಲ್ಲ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು