Wednesday, May 15, 2024

 ಕಥೆ-397

ಮೋಸದ ಗುಣ

ಹಿಂದಿನ ಕಾಲದ ಒಂದು ಕಥೆ, ಇಂದಿಗೂ ಪ್ರಸ್ತುತವಾಗಿದೆ.

ಒಬ್ಬ ಬ್ರಾಹ್ಮಣ ಯಾತ್ರೆಗೆಂದು ಪ್ರಯಾಣ ಬೆಳೆಸಿದ್ದಾನೆ. ಸಂಜೆಯಾಗುತ್ತಾ ಬಂದಿದ್ದರಿಂದ, ಹತ್ತಿರವಿದ್ದ ಹಳ್ಳಿಯಲ್ಲಿ ಯಾರೋ ಒಬ್ಬನ ಮನೆಯಲ್ಲಿ ಉಳಿದುಕೊಳ್ಳಲು ಹೋಗುತ್ತಾನೆ. ತಡ ರಾತ್ರಿಯಾಗಿದ್ದರಿಂದ ಆ ಮನೆಯವರು ಊಟ ಮುಗಿಸಿ ಕುಳಿತಿರುತ್ತಾರೆ. ಮನೆಗೆ ಬ್ರಾಹ್ಮಣ ಬಂದಿದ್ದಾನೆ, ಆಯಾಸವಾಗಿರುತ್ತದೆ, ಊಟಕ್ಕೆ ಏನಾದರೂ ಏರ್ಪಾಡು ಮಾಡಬೇಕೆಂದು ತನ್ನ ಹುಡುಗನನ್ನು ಕರೆದು ಪದಾರ್ಥಗಳನ್ನು ತರಲು ಹೇಳುತ್ತಾನೆ. ರಾತ್ರಿಯಲ್ಲೂ ಹೇಗೋ ಪದಾರ್ಥಗಳನ್ನು ತಂದು ಕೊಡುತ್ತಾನೆ. ಅಡುಗೆ ಮಾಡಿ ಬಡಿಸಿ, ನಂತರ ಮನೆಯಲ್ಲಿ ಕಟ್ಟಿದ್ದ ಹಸುವಿನ ಹಾಲು ಕೊಟ್ಟು ಮಲಗಲು ಏರ್ಪಾಡು ಮಾಡುತ್ತಾರೆ. ರುಚಿಯಾದ ಹಾಲು ಕುಡಿದು ಯಜಮಾನನ ಉಪಚಾರದಿಂದ ಸಂತುಷ್ಟಗೊಂಡ ಬ್ರಾಹ್ಮಣ ನಿದ್ದೆಗೆ ಜಾರುತ್ತಾನೆ. ನಡು ರಾತ್ರಿ ಆತನಿಗೆ ಎಚ್ಚರವಾಗಿ ಆ ಹಸುವಿನ ಹಾಲು ಅಷ್ಟೊಂದು ರುಚಿಯಾಗಿದೆ, ಅದನ್ನು ಕದ್ದೊಯ್ದರೆ ತನ್ನ ಹೆಂಡತಿ ಮಕ್ಕಳು ಪ್ರತಿನಿತ್ಯ ರುಚಿಯಾದ ಹಾಲು ಮೊಸರು ತಿನ್ನಬಹುದು ಎಂಬ ದುರಾಲೋಚನೆ ಬರುತ್ತದೆ. ತಡ ಮಾಡದೆ ಆ ಕೆಲಸವನ್ನು ಮಾಡಿಯೇ ಬಿಡುತ್ತಾನೆ.

ಸೂರ್ಯೋದಯವಾಗುತ್ತದೆ, ಯಜಮಾನ ಬ್ರಾಹ್ಮಣನಿಗೆ ಎಬ್ಬಿಸಿ ಹಾಲು ಕೊಟ್ಟು ಆತನ ಮುಂದಿನ ಪ್ರಯಾಣಕ್ಕೆ ಸಹಾಯ ಮಾಡಬೇಕೆಂದು ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಹಸು ಕಾಣಿಸುವುದಿಲ್ಲ. ಸರಿ ಬ್ರಾಹ್ಮಣನನ್ನು ಎಬ್ಬಿಸೋಣ ಎಂದು ಕೊಠಡಿಗೆ ಹೋದರೆ ಬ್ರಾಹ್ಮಣನೂ ಹೋಗಿರುತ್ತಾನೆ. ತಕ್ಷಣ ಕೋಪಗೊಳ್ಳದೇ ಛೇ ಅನಾಯಾಸವಾಗಿ ಬಂದಿದ್ದನು, ಆ ಹಸುವನ್ನು ದಾನ ಮಾಡಿದ್ದರೆ ನನಗೂ ಪುಣ್ಯ ಬರುತ್ತಿತ್ತು, ಆತನಿಗೂ ಈ ಕೆಟ್ಟ ಕೆಲಸ ಮಾಡದ ಹಾಗಾಗುತ್ತಿತ್ತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಹುಡುಕಿಯಾದರೂ ಅವನಿಗೆ ದಾನ ಮಾಡಿ ಬರಬೇಕು ಎಂದುಕೊಂಡು ಹೊರಡುತ್ತಾನೆ.

ಇತ್ತ ಬ್ರಾಹ್ಮಣ ಯಾವುದೋ ಮರದ ಕೆಳಗೆ ಮಲಗಿದ್ದವನು ಎದ್ದಾಗ ತನ್ನ ತಪ್ಪಿನ ಅರಿವಾಗುತ್ತದೆ. ಎಂದೂ ಈ ರೀತಿಯ ತಪ್ಪು ಮಾಡಿದವನಲ್ಲ, ಇಂದು ಏಕೆ ಹೀಗೆ ಮಾಡಿದೆ, ಉಪಕಾರ ಮಾಡಿದ ಆ ಯಜಮಾನನಿಗೆ ಪುನಃ ಹಸುವನ್ನು ಹಿಂತಿರುಗಿಸಬೇಕೆಂದು ಊರ ಕಡೆ ಹೊರಡುತ್ತಾನೆ.

ಊರ ಬಾಗಿಲಿನ ಹತ್ತಿರ ಇಬ್ಬರು ಎದರುಗೊಳ್ಳುತ್ತಾರೆ. ಆ ಬ್ರಾಹ್ಮಣ ಕ್ಷಮೆ ಕೇಳಿ, ನನ್ನಿಂದ ಈ ತಪ್ಪು ಹೇಗಾಯಿತು ಎಂದು ತಿಳಿಯುತ್ತಿಲ್ಲ. ಎಂದು ಹಸುವನ್ನು ಹಿಂತಿರುಗಿಸುತ್ತಾನೆ. ನಂತರ ಆ ತಡ ರಾತ್ರಿಯಲ್ಲಿ ಆಹಾರದ ಪದಾರ್ಥಗಳು ಎಲ್ಲಿ ಸಿಕ್ಕವು ಎಂದು ಕೇಳುತ್ತಾನೆ. ಯಜಮಾನ ಹುಡುಗನನ್ನು ಕರೆದು ಕೇಳುತ್ತಾನೆ. ಆತ ನಡೆದ ಘಟನೆಯನ್ನು ವಿವರಿಸುತ್ತಾನೆ. ಎಲ್ಲೂ ಸಿಗದ ಕಾರಣ, ಕದ್ದು ತಂದೆ ಎಂದು ತಪ್ಪೊಪ್ಪಿಕೊಳ್ಳುತ್ತಾನೆ. ಆಗ ಬ್ರಾಹ್ಮಣ ಇಷ್ಟಕ್ಕೆಲ್ಲಾ ಕಾರಣ ಆ ಕದ್ದು ತಂದ ಅಕ್ಕಿ ಎಂದು ಹೇಳಿ ಯಜಮಾನನಿಗೆ ಧನ್ಯವಾದವನ್ನು ತಿಳಿಸಿ ಮುಂದುವರೆಯುತ್ತಾನೆ.

*ನೀತಿ:*

ತಿನ್ನುವ ಆಹಾರ ಶುದ್ಧವಾಗಿರಬೇಕು (ಬಾಹ್ಯ ಸ್ವಚ್ಛತೆಯ ಜೊತೆಗೆ, ಅದನ್ನು ಪಡೆದ ರೀತಿ). ಮೋಸದಿಂದ ಗಳಿಸಿದ ಆಹಾರ ಸೇವನೆ ನಮ್ಮಲ್ಲಿ ಮೋಸದ ಗುಣಗಳನ್ನು ಬೆಳೆಸುತ್ತದೆ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು