Thursday, December 26, 2024

 ಕಥೆ-621

ತಾಯಿ ಕಲಿಸಿದ ಪಾಠ


ವ್ಯವಹಾರಿಕ ಪ್ರೇಮದಲ್ಲಿ ಗಳಿಕೆಯ ಉದ್ದೇಶವಿದೆ. ವೈಷಯಿಕ ಪ್ರೇಮದಲ್ಲಿ ಮೋಹವಿದೆ, ಆಕರ್ಷಣೆಯಿದೆ. ಉದಾತ್ತ ಪ್ರೇಮದಲ್ಲಿ ಮೋಹವೂ ಇಲ್ಲ, ಲಾಭದ ದೃಷ್ಟಿಕೋನವೂ ಇಲ್ಲ. ನನಗೆ ಏನಾದರೂ ಆಗಲಿ; ಇನ್ನೊಬ್ಬರಿಗೆ ಒಳ್ಳೆಯದಾಗಲಿ, ಹಿತವಾಗಲಿ, ಲಾಭವಾಗಲಿ ಎಂಬ ಸದ್ಭಾವವಿದೆ. ಅವರನ್ನೇ ದೇಶಭಕ್ತರು, ಈಶಭಕ್ತರು ಎಂದು ಕರೆಯುತ್ತಾರೆ.


ಈಶ್ವರಚಂದ್ರ ವಿದ್ಯಾಸಾಗರರು ಚಿಕ್ಕ ಬಾಲಕರಾಗಿದ್ದಾಗ ನಡೆದ ಒಂದು ಘಟನೆ. ಅವರ ತಾಯಿ ತುಂಬಾ ಸುಸಂಸ್ಕೃತರು. ಮಗನಿಗೂ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಬೆಳೆಸುತ್ತಿದ್ದರು. ತಾಯಿ ದಿನಾಲು ನಸುಕಿನಲ್ಲಿ ಎದ್ದು ಅಂಗಳದ ಕಸ ಗುಡಿಸಿ ಸ್ವಚ್ಛಗೊಳಿಸುತ್ತಿದ್ದಳು. ಗುಡಿಸಿದ ಕಸ ಚೆಲ್ಲುವ ಮೊದಲೇ ನೆರೆ ಮನೆಯವರು ತಮ್ಮ ಕಸವನ್ನು ತಂದು ಇವರ ಮನೆಯ ಮುಂದೆ ಹಾಕುತ್ತಿದ್ದರು, ಆದರೆ ಈಶ್ವರಚಂದ್ರರ ತಾಯಿ ಒಂದಿಷ್ಟೂ ಬೇಸರಿಸದೆ ತಮ್ಮ ಮನೆಯ ಕಸದೊಂದಿಗೆ ಅದನ್ನೂ ಎತ್ತಿಕೊಂಡು ದೂರ ಚೆಲ್ಲಿ ಬರುತ್ತಿದ್ದರು. ಒಂದು ದಿನ ಬಾಲಕ ಈಶ್ವರಚಂದ್ರ ತಮ್ಮ ತಾಯಿಗೆ ಕೇಳಿದರು- ಒಂದು ವರ್ಷ ಮೇಲಾಯಿತು, ನೋಡುತ್ತಿದ್ದೇನೆ ನೆರೆಮನೆಯವರ ಕಸವನ್ನು ನೀನೇ ಚೆಲ್ಲಿ ಬರುತ್ತಿರುವಿ. ಇದು ಹೀಗೆ ಎಷ್ಟು ದಿವಸ ಮಾಡುವಿಯಮ್ಮ?' ತಾಯಿ ಹೇಳಿದರು- 'ಮಗು, ಇತರರಿಗೆ ಒಳ್ಳೆಯದನ್ನು ಮಾಡುವುದು ನನ್ನ ಹುಟ್ಟುಗುಣ. ಇತರರಿಗೆ ಒಳ್ಳೆಯದಲ್ಲದ್ದನ್ನು ಮಾಡುವುದು ಅವರ ಹುಟ್ಟುಗುಣ ಇರಬಹುದು. ಅವರು ತಮ್ಮ ಗುಣವನ್ನು ಎಷ್ಟು ನಿಷ್ಠೆಯಿಂದ ಉಳಿಸಿಕೊಂಡು ಬಂದಿದ್ದಾರೆ. ನಾನೇಕೆ ಇನ್ನೊಬ್ಬರಿಗೆ ಸಹಾಯ ಮಾಡುವ ನನ್ನ ಹುಟ್ಟುಗುಣ ಬಿಡಲಿ?' ತಾಯಿಯ ಈ ಸದ್ಗುಣದಿಂದ ಪ್ರೇರಣೆ ಪಡೆದ ಅದೇ ಬಾಲಕ ಈಶ್ವರಚಂದ್ರ ಮುಂದೆ ಮಹಾನ್ ಸಂತನಾಗಿದ್ದ! ಇದಲ್ಲವೇ ತಾಯಿ ನಮಗೆ ಕಲಿಸಬೇಕಾದ ಪಾಠ!

ಶ್ರೀ ಸಿದ್ದೇಶ್ವರ ಸ್ವಾಮಿಗಳು

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು