ಕಥೆ-697
ಛೋಟಾ ಸಾ ಕಾಮ್ ಮಾ"
ದಿನದ ಕೊನೆಯ ರೈಲು ಪ್ಲಾಟ್ಫಾರ್ಮ್ನಿಂದ ಹೊರಟು ಹೋಗಿದೆ. ಮುಂದಿನ ರೈಲು ನಾಳೆ ಬೆಳಿಗ್ಗೆ ಬರುತ್ತದೆ ಎಂಬ ಕಲ್ಪನೆಯಿಲ್ಲದೆ ವೃದ್ಧೆ ಕುಳಿತಿದ್ದಾಳೆ.. ಕೂಲಿಯೊಬ್ಬರು ಅದನ್ನು ಗಮನಿಸಿ ತಾಯಿಯನ್ನು ಕೇಳಿದರು, ನೀವು ಎಲ್ಲಿಗೆ ಹೋಗುತ್ತಿದ್ದೀರಿ? ನಾನು ದೆಹಲಿಗೆ ನನ್ನ ಮಗನ ಬಳಿಗೆ ಹೋಗುತ್ತೇನೆ, ಇವತ್ತು ರೈಲು ಇಲ್ಲ. ಆ ಮಹಿಳೆ ಅಸಹಾಯಕಳಾಗಿ ಕಾಣುತ್ತಿದ್ದಳು. ಕೂಲಿ ನಮ್ಮ ಕೋಣೆಯಲ್ಲಿ ಆಶ್ರಯ ಪಡೆಯಬಹುದಾಗಿದೆ ಎಂದಾಗ ಅವಳು ಒಪ್ಪಿದಳು. ವೃದ್ಧೆಯ ಮಗನ ಬಗ್ಗೆ ಕೇಳಿದಾಗ, ತಾಯಿ ತನ್ನ ಮಗ ರೈಲ್ವೆಯಲ್ಲಿ ಕೆಲಸ ಮಾಡುತ್ತಾನೆ ಎಂದು ಉತ್ತರಿಸಿದಳು. ಹೆಸರು ಹೇಳಿ.. ನಂಬರ್ ಇದ್ರೆ ಫೋನ್ ಸಂಪರ್ಕ ಮಾಡೋಣ ಎಂದಾಗ , ಅವನು ನನ್ನ ಲಾಲ್, ಎಲ್ಲರೂ ಅವನನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಕರೆಯುತ್ತಾರೆ ಎಂದಳು(ಮಗ ಭಾರತೀಯ ರೈಲ್ವೆಯ ಅತ್ಯುನ್ನತ ಕ್ಯಾಬಿನೆಟ್ ಮಂತ್ರಿಯಾಗಿದ್ದಾನೆ ತಾಯಿಗೆ ಅದರ ಅರಿವಿಲ್ಲ) ಒಂದು ಕ್ಷಣದಲ್ಲಿ, ಇಡೀ ನಿಲ್ದಾಣವು ಉನ್ಮಾದದಲ್ಲಿತ್ತು. ಶೀಘ್ರದಲ್ಲೇ, ಒಂದು ಕಾರು ಬಂದಿತು. ಮಹಿಳೆಗೆ ಸಕಲ ಸೌಲಭ್ಯವನ್ನು ಮಾಡಿಕೊಡಲಾಯಿತು. ವೃದ್ಧ ಮಹಿಳೆಗೆ ಆಶ್ಚರ್ಯವಾಯಿತು.
ಕೊನೆಗೆ ಮಹಿಳೆಯನ್ನು ದೆಹಲಿಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು...
ಲಾಲ್ ಬಹದ್ದೂರ್ ಶಾಸ್ತ್ರಿಗೆ ಏನೂ ತಿಳಿದಿರಲಿಲ್ಲ. ಎಲ್ಲಾ ವ್ಯವಸ್ಥೆಗಳನ್ನು ಭಾರತೀಯ ರೈಲ್ವೆ ಮಾಡಿತ್ತು. ತನ್ನ ಮಗನನ್ನು ಭೇಟಿಯಾದ ನಂತರ, ಅವಳು ಮಗನನ್ನು ಕೇಳಿದಳು - "ಬೇಟಾ ತು ರೈಲ್ ಮೇ ಕ್ಯಾ ಕಾಮ್ ಕರ್ತಾ ಹೈ? ಯೇ ಲೋಗ್ ಪುಚಾ ತೋ ಮೈನೆ ಕುಚ್ ನೇಹಿ ಬೋಲ್ಪಾಯಾ" "ಅವನು ಹೇಳಿದ "ಛೋಟಾ ಸಾ ಕಾಮ್ ಮಾ"
ಈ Simplicity ಅನುಕರಣೀಯ....
ನಾವು ಒಂದು ಚಿಕ್ಕ ಹುದ್ದೆಯಲ್ಲಿದ್ದರೆ ಹೆಚ್ಚು ಕೊಚ್ಚಿಕೊಳ್ಳುತ್ತೇವೆ, ಅತ್ಯುನ್ನತ ಹುದ್ದೆಯಲ್ಲಿದ್ದರೂ ಸಹ ಛೋಟಾ ಸಾ ಕಾಮ್ ಎನ್ನುವುದು ಇಂತಹ ವ್ಯಕ್ತಿಗಳಿಗೆ ಸಾಧ್ಯ...
🙏🫡
No comments:
Post a Comment