Sunday, July 6, 2025

ಕಥೆ-780

ಭಾವೈಕ್ಯತೆ ಬೆಸೆಯುವ ಹಬ್ಬ ಮೊಹರಂ

https://basapurs.blogspot.com


ಇಲ್ಲಿ ಹೆಜ್ಜೆ ಹಾಕುತ್ತೇವೆ, ಕುಣಿಯುತ್ತೇವೆ, ನಾವೆಲ್ಲ ಒಂದೆ ಎನ್ನುವ ಕೈ ಕೈಯಿಗಳ ಮಿಲನ ಗಟ್ಟಿಯಾಗಿದೆ, ಇಲ್ಲಿ ಹೊಸತನವು, ಮನೆ ಮನಸುಗಳ ತೊಳೆದು ಮತ್ತೇ ಪ್ರೇಮದ ಬತ್ತಿ ಉರಿಸುತ್ತಿದೆ ... ಇಲ್ಲಿ  ಜಾತಿ ಭೇದ ಗೊತ್ತಿಲ್ಲ, ಆದರೆ ಸರ್ವ ಧರ್ಮ ಸಮನ್ವಯವಿದೆ.. ನೈಜತೆಯ ಅನಾವರಣದ ಸತ್ಯವಿದೆ, ನೈತಿಕತೆ ಇದೆ ಮತ್ತೆ ಒಂದಾಗುವ ಭಾವವಿದೆ ನನ್ನವರೆಂಬ ಮಮತೆ ಗೂಡಾಗಿದೆ


ಐಕ್ಯತೆಯ ಸಾರುವ ಗೆಜ್ಜೆ ಹದ್ದು, ಹಲಗೆಯ ನಾದದ ಶಾಂತಿಯ ತೋಟವಿದೆ.. ಅಹಿಂಸಾ ಸತ್ಯಗಳ ತತ್ವವಿದೆ ಹೀಗೆ ಎಲ್ಲರೂ ಕೂಡುವ ಸೇರಿ ಪ್ರೀತಿ ಹಂಚುವ ಹಬ್ಬ ಮೋಹರಂ....


ಜಾತಿಯ ಚೌಕಟ್ಟನ್ನು ಮೀರಿ ಮನುಕುಲವೆಲ್ಲ ಒಂದೇ ಎಂಬ ಸಂದೇಶ ಸಾರುವ ಭಾವೈಕ್ಯತೆ ಹಬ್ಬವೇ ಮೊಹರಂ. ಸರ್ವ ಧರ್ಮಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವ ಮೂಲಕ ಮಾನವೀಯ ಮೌಲ್ಯಗಳ ಸಾರುವ ಹಬ್ಬವೇ ಮೊಹರಂ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಸರ್ವಧರ್ಮಿಯರು ಸೇರಿ ಆಚರಿಸುವ ಹಬ್ಬವಾಗಿದೆ.


ಪ್ರವಾದಿ ಮಹಮ್ಮದರ ಮೊಮ್ಮಗ ಹುಸೇನ್ ಇಬ್ ಅಲಿಯವರ ತ್ಯಾಗ ಬಲಿದಾನವನ್ನು ಸ್ಮರಿಸುವ ದಿನವೇ ಈ ಮೊಹರಂ. ಮೊಹರಂ  ಹಬ್ಬವು ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆ ಹಬ್ಬವಾಗಿದೆ. ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದರ ಮೊಮ್ಮಗ ಹುಸೇನ್ ಇಬ್ ಅಲಿ ಹಾಗೂ 72 ಹಿಂಬಾಲಕರು ಧರ್ಮದ ಉಳಿವಿಗಾಗಿ ಯುದ್ಧ ಮಾಡಿ ಹುತಾತ್ಮರಾದ ದಿನವೇ ಈ ಮೊಹರಂ. ಈ ಯುದ್ಧದ ಸಮಯದಲ್ಲಿ ಇಮಾಮ್ ಹುಸೇನರನ್ನು ಮೋಸದಿಂದ ಕೊಲ್ಲಲಾಯಿತು. ಹುಸೇನರ ತ್ಯಾಗ ಬಲಿದಾನವನ್ನು ಇಂದಿಗೂ ಸ್ಮರಿಸಲಾಗುತ್ತಿದೆ..  ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹ ಎಲ್ಲಾ ಜಾತಿ ಜನಾಂಗಗಳ ಸದಸ್ಯರು ಮುಂದೆ ನಿಂತು ಮೊಹರಂ ಆಚರಣೆಯನ್ನು ಮಾಡುತ್ತಾರೆ.  ಹಿಂದೂ ಹಾಗೂ ಮುಸ್ಲಿಮರು ಭಾವೈಕ್ಯ ಭಾವನೆಯಿಂದ ಜೊತೆ ಜೊತೆಗೆ ಸಾಗುತ್ತಿದ್ದಾರೆ. ಮೊಹರಂ ಅಂತಹ ಹಬ್ಬಗಳು ಭಾವೈಕ್ಯತೆಯನ್ನು ಬೆಸೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಮೋಹರಂ ಹಬ್ಬದ ಶುಭಾಶಯಗಳು...💐💐💐

-ಶ್ರೀ ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು