ಕಥೆ-904
ಹಿರಿಯರಿಗೆ, ಅನ್ನ ಕಿಂತಲೂ ಅಪ್ಪುಗೆ ಮುಖ್ಯ... ಚಿನ್ನಕ್ಕಿಂತಲೂ ಕಾಳಜಿ ಮುಖ್ಯ.
https://basapurs.blogspot.com/
*ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ.*
ನ್ಯಾಯದೀಶರು : *" ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು.*
ತಂದೆ : *"ಇಲ್ಲಾ ಸ್ವಾಮಿ, ನನಗೆ ನನ್ನ ಮಗನ ಕಡೆಯಿಂದ, ಪ್ರತಿತಿಂಗಳು, ಸ್ವಲ್ಪವಾದರೂ, ಬೇಕೇಬೇಕು ". ಎಂದ.*
*ಹಠಕ್ಕೆ ಬಿದ್ದ ತಂದೆಗೆ ನ್ಯಾಯ ಕೊಡಬೇಕೆಂದು, ಆ ಮಗನನ್ನು, ಕೋರ್ಟಿಗೆ ಬರಲು ಹೇಳಿದ ಜಡ್ಜ್, ಕೇಸ್ ಮುಂದಕ್ಕೆ ಹಾಕಿದರು.*
*****
*ಕೋರ್ಟ್ ನಿರ್ಧರಿಸಿದ, ದಿನ, ಮಗ ಬಂದು, ಕಟಕಟೆಯಲ್ಲಿ ನಿಂತುಕೊಂಡ.*
ನ್ಯಾಯಾದೀಶರು :
*" ನಿಮ್ಮ ತಂದೆ, ನಿಮ್ಮಿಂದ ಪ್ರತಿತಿಂಗಳು, ಮಾಶಾಸನ ಕೇಳುತ್ತಿದ್ದಾರೆ. ಕೊಡಬೇಕಾಗುತ್ತೆ ". ಅಂದರು.*
ಮಗ :
*" ಸ್ವಾಮಿ, ಅವರಲ್ಲಿಯೇ ಧನ ಕನಕ, ಆಸ್ತಿ, ಹೇರಳ ವಾಗಿದೆ".*
ನ್ಯಾಯಾದೀರು :
*ಮತ್ತೇಕೆ ಕೇಳುತ್ತಿದ್ದಾರೆ ಅಂತಾ ನಿನಗೇನಾದರೂ ಗೊತ್ತಾ?*
ಮಗ :
*"ಇಲ್ಲ, ಸ್ವಾಮಿ".*
ನ್ಯಾಯಾದೀಶರು:
*"ಯಜಮಾನರೇ, ನೀವೇಕೆ ಹಠವಿಡಿದಿದ್ದೀರಿ?*
ತಂದೆ :
*-"ಸ್ವಾಮಿ, ಇದು ಹಠವಲ್ಲ, ನನ್ನ ಹಕ್ಕು"*
ನ್ಯಾಯಾದೀಶರು :
*ಹೌದೌದು, ಹೇಳಿ ಎಷ್ಟು ನಿರೀಕ್ಷಿಸುತ್ತೀರಿ?*
ತಂದೆ:
*"ಪ್ರತಿ ತಿಂಗಳ ಎರಡನೇ ತಾರೀಕಿಗೊಮ್ಮೆ, ಅವನೇ ಬಂದು ನೂರು ರೂಪಾಯಿ ಕೊಡಬೇಕು".*
*ಕೋರ್ಟಿನಲ್ಲಿದ್ದ ವಕೀಲರೆಲ್ಲಾ, ಗೊಳ್ಳೆoದು ನಕ್ಕರು.*
ನ್ಯಾಯಾದೀಶರು :
*ಸೈಲೆನ್ಸ್.... , ಸೈಲೆನ್ಸ್......!*
ಮಗ :
*"ಸರಿ ಸ್ವಾಮಿ, ಕೊಡುತ್ತೇನೆ".*
ನ್ಯಾಯಾದೀಶರು :
*ಕೊಡುತ್ತೇನೆಂದು ಒಪ್ಪಿಕೊಂಡಿದ್ದಾನೆ. ಮತ್ತೇನೂ, ತಕರಾರು ಇಲ್ಲವಾ.....?*
ತಂದೆ :
*ಇಲ್ಲ ಸ್ವಾಮಿ, ಮತ್ತೇನಿಲ್ಲ, ಅಷ್ಟು ಕೊಟ್ಟರೆ ಸಾಕು.*
ನ್ಯಾಯಾದೀಶರು : *ತೀರ್ಪು ಬರೆದು ಓದಿ ಮುಗಿಸಿದರು, ಕೋರ್ಟ್ ಕಲಾಪದ ಮುಕ್ತಾಯವನ್ನೂ ಮಾಡಿ, ತಮ್ಮ ಆಂಟಿ ಚಂಬರ್ ಒಳಗೆ ಹೋಗಿ, ಆ ಶ್ರೀಮಂತನನ್ನು ಕರೆತರಲು ಹೇಳಿದರು.*
*ಇವರು, ಬಂದರು.*
ನ್ಯಾಯಾದೀಶರು :
*ಅಲ್ಲ, ನೀವೇಕೆ ಕೇವಲ ನೂರು ರೂಪಾಯಿಯನ್ನೇ ಪ್ರತಿ ತಿಂಗಳು ಕೊಡಬೇಕೆಂದು ಕೇಳಿದ್ರಿ?*
ತಂದೆ :
*"ಸ್ವಾಮಿ, ನನಗೆ ಅವನ ದುಡ್ಡಿನ ಅವಶ್ಯಕತೆಯೇ ಇಲ್ಲ, ನನಗೆ ಅವನೊಬ್ಬನೇ ಮಗ, ಚೆನ್ನಾಗಿ ಓದಿದ್ದಾನೆ,ದೂರದ ನಗರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ನನ್ನನ್ನು ನೋಡಲು ಅವನು ಬರುವುದೇ ಇಲ್ಲ. ಆದರೆ, ನನಗೆ ಅವನನ್ನು ತಿಂಗಳಿಗೊಮ್ಮೆಯಾದರೂ ನೋಡಬೇಕೆಂಬ ಆಶೆ, ಆ ಕಾರಣಕ್ಕಾಗಿ, ಕೋರ್ಟ್ ಆದೇಶದಂತೆ ಅವ ನೂರು ರೂಪಾಯಿ ಕೊಡಲಿಕ್ಕಾದರೂ ತಪ್ಪದೇ ಬರಬೇಕಲ್ಲ. ಅವಾಗಲಾದರೂ, ಅವನನ್ನು ಕಣ್ಣು ತುಂಬಾ ನೋಡಬಹುದೆoದು, ಕೊರ್ಟ್ ಮೂಲಕ ತಾಕೀತು ಮಾಡಿಸಿದೆ ಅಷ್ಟೇ.*
********
*ಅಂದೇ ಕೋರ್ಟಿಗೆ ಮೂರು ದಿನ ರಜೆ ಹಾಕಿದ ಜಡ್ಜ್, ತಂದೆಗೆ ಫೋನ್ ಮಾಡಿ, ನಾನು ಊರಿಗೆ ಬರುತ್ತಿದ್ದೇನೆ,* *ಏನಾದರೂ ತರುವುದಿದೆಯಾ? ಎಂದ. ಅತ್ತಲಿಂದ,*
*ಸಣ್ಣಗಿನ ಧ್ವನಿಯಲ್ಲಿ ಕೇಳಿಸಿದ್ದು,*
*"ನೀನು ಬಾರಪ್ಪ ಸಾಕು ಬೇರೇನೂ ಬೇಕಿಲ್ಲ. ಎಷ್ಟೋ ದಿನ ಆಯ್ತು ನಿನ್ನ ನೋಡದೇ ".*
******
*ಹಿರಿಯರಿಗೆ, ಅನ್ನ ಕಿಂತಲೂ ಅಪ್ಪುಗೆ ಮುಖ್ಯ.*
*ಚಿನ್ನಕ್ಕಿಂತಲೂ ಕಾಳಜಿ ಮುಖ್ಯ.*
*ಅಲ್ವಾ............*
ಸಂಗ್ರಹ: ಸೌಜನ್ಯ ಹೊಟ್ಟಿನ ಹಿರೇಮ್ಯಾಗೇರಿ
No comments:
Post a Comment