ಕಥೆ-671
*ಬೇರೆಯವರ ಬಗ್ಗೆ ಹಬ್ಬಿಸುವ ಗಾಳಿಸುದ್ದಿಗಳು*...
https://basapurs.blogspot.com/
*ಒಬ್ಬ ವ್ಯಕ್ತಿ ಇದ್ದ. ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ.* ಯಾವಾಗಲೂ ಇದೇ ಅವನ ಕೆಲಸ.
_*ಒಂದು ಸಲ ಊರಲ್ಲಿ ಯಾವುದೋ ಕಳ್ಳತನವಾದಾಗ, ತಾನೇ ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು ಕಂಡರೆ ಇವನಿಗೆ ಅಷ್ಟಕಷ್ಟೆ.ಆ ತರುಣನನ್ನು ಪೊಲೀಸರು ಬಂಧಿಸಿದರು. ವಿಚಾರಣೆಯೆಲ್ಲಾ ನಡೆದು, ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು.*_
*ಅವಮಾನಿತನಾದ ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ, ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ*.
_*ನ್ಯಾಯಾಲಯದಲ್ಲಿ ಈ ವ್ಯಕ್ತಿ, ನಾನು ಸುಮ್ಮನೆ ಅವನು ಇದ್ರೂ ಇರಬಹುದು ಎಂದು ಅನುಮಾನದಿಂದ ಹೇಳಿದ್ದು, ಅದರಿಂದ ಈಗ ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ.*_
*ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ ವ್ಯಕ್ತಿಯನ್ನು ಕರೆದು, ನೀನು ಆ ಯುವಕನ ಬಗ್ಗೆ ಕಳ್ಳ ಎಂದು ಹಬ್ಬಿಸಿದ ಸುಧ್ಧಿಯನ್ನು ಒಂದು ಕಾಗದದ ಮೇಲೆ ಬರೆದು, ಆ ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆ ಯುದ್ಧಕ್ಕೂ ಚೆಲ್ಲುತ್ತಾ ಹೋಗು, ನಾಳೆ ತೀರ್ಪು ಕೇಳಲು ಬಾ ಎಂದರು*.
_*ಮಾರನೇ ದಿನ ಆತ ತೀರ್ಪು ಕೇಳಲು ಬಂದಾಗ, ನ್ಯಾಯಾಧೀಶರು, ನಿನ್ನೆ ನೀನು ಚೆಲ್ಲಿದ ಕಾಗದದ ಚೂರುಗಳನ್ನು ವಾಪಸು ಆರಿಸಿಕೊಂಡು ಬಾ ಎಂದರು.*_
*ಆಗ ಆ ವ್ಯಕ್ತಿ, ಅದು ಹೇಗೆ ಸಾಧ್ಯ? ಈಗ ಅವೆಲ್ಲ ಗಾಳಿಗೆ ಹಾರಿ ಹೋಗಿವೆ, ಆ ಚೂರುಗಳನ್ನು ಈಗ ಆರಿಸಿ ತರಲು ಅದ್ಹೇಗೆ ತಾನೇ ಸಾಧ್ಯ?ಎಂದ*.
_*ಆಗ ನ್ಯಾಯಾಧೀಶರು, ಅದೇ ರೀತಿ ನೀನು , ಒಬ್ಬ ಒಳ್ಳೆಯ ವ್ಯಕ್ತಿಯ ಬಗ್ಗೆ, ಮಾಡಿದ ಗಾಸಿಪ್ ಎಲ್ಲೆಡೆಯೂ ಹರಿದು ಹೋಗಿದೆ . ಅವು ಆತನ ಘನತೆಗೆ ಧಕ್ಕೆ ತರಬಲ್ಲವು. ಆ ತಪ್ಪನ್ನು ಈಗ ನೀನು ಸರಿಪಡಿಸಲು ಸಾಧ್ಯವೇ, ಒಬ್ಬರ ಹಿಂದೆ ಇಂತಹ ನೀಚ ಕೆಲಸವನ್ನು ಮಾಡುವ ಮುನ್ನ ಆತ್ಮಸಾಕ್ಷಿ ಎಂಬುದು ಒಮ್ಮೆಯಾದರೂ, ನಿನ್ನನ್ನು ಎಚ್ಚರಿಸಲಿಲ್ಲವೇ? ಎಂದು ಕೇಳಿದರು.*_
*ಆ ವ್ಯಕ್ತಿಗೆ, ಈಗ ತನ್ನ ತಪ್ಪಿನ ಅರಿವಾಗಿ, ಯುವಕನಲ್ಲಿ ಕ್ಷಮೆಯೇನೂ ಯಾಚಿಸಿ, ಸ್ವಲ್ಪ ದಂಡ ಕಟ್ಟಿದ,ಆದರೆ ಹೋದ ಮಾನವನ್ನು ಇವನು ತಂದುಕೊಡಲು ಸಾಧ್ಯವೇ*.
ಸದಾ ಇನ್ನೊಬ್ಬರನ್ನು ದೂಷಣೆ ಮಾಡುತ್ತಾ ,ಅವರ ಬಗ್ಗೆ ಇಲ್ಲ ಸಲ್ಲದ ಸುದ್ಧಿ ಹಬ್ಬಿಸುತ್ತ ಸಂತೋಷಪಡುವುದು ಒಂದು ಮಹಾ ದೊಡ್ಡ ರೋಗ. ಅದರಿಂದ ದೂರವಿದ್ದರೆ ,ನಮಗೂ ಹಾಗೂ ಸಮಾಜಕ್ಕೂ ಒಳ್ಳೆಯದು.
*ಕೃಪೆ : ಸುವರ್ಣಾ ಮೂರ್ತಿ.*
No comments:
Post a Comment