ಕಥೆ-813
ಸಮಸ್ಯೆ ಎದುರಿಸಲು ತಾಳ್ಮೆ ಬೇಕು
https://basapurs.blogspot.com
ನಾವು ಯಾವುದೇ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾಗ ಕೆಲವೊಮ್ಮೆ ಹಲವು ಅಡೆತಡೆಗಳು ಎದುರಾಗುತ್ತವೆ.
ನೂರೆಂಟು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಬಹಳಷ್ಟು ಬಾರಿ ನಾವು ಆ ಸಮಸ್ಯೆಗಳಿಂದ ವಿಚಲಿತರಾಗುತ್ತೇವೆ. ಏನು ಮಾಡಬೇಕು ಎಂದು ಗೊತ್ತಾಗದೆ, ಆ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿಬಿಡುತ್ತೇವೆ. ಆದರೆ, ಇದು ತಪ್ಪು. ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ. ಆದರೆ, ನಾವು ಆ ಪರಿಹಾರಗಳತ್ತ ಗಮನಹರಿಸುವುದಿಲ್ಲ ಅಷ್ಟೇ. ಒಂದು ಸಮಸ್ಯೆ ಎದುರಾದಾಗ ನಾವು ಮಾಡುವ ಅತಿದೊಡ್ಡ ತಪ್ಪೇನೆಂದರೆ, ನಾವು ಆ ಸಮಸ್ಯೆಯ ಬಗ್ಗೆ ಗಮನಹರಿಸುವುದಕ್ಕೆ ಪ್ರಾರಂಭಿಸುತ್ತೇವೆ. ನಾವು ಆ ಸಮಸ್ಯೆಯನ್ನು ಪಕ್ಕಕ್ಕಿಟ್ಟು, ಅದಕ್ಕೆ ಏನೇನು ಪರಿಹಾರ ಸಿಗಬಹುದು ಎಂದು ಸ್ವಲ್ಪ ತಾಳ್ಮೆಯಿಂದ ಕುಳಿತು ಯೋಚಿಸಿದರೆ, ಹಲವು ಉತ್ತರಗಳು ಸಿಗುತ್ತವೆ. ನಾವು ಆ ಪೈಕಿ ಯಾವುದು ಉತ್ತಮ ಎಂಬುದನ್ನು ಸರಿಯಾಗಿ ಆಯ್ಕೆ ಮಾಡಿಕೊಂಡರೆ, ಅಲ್ಲಿಗೆ ಸಮಸ್ಯೆ ಅರ್ಧ ಬಗೆಹರಿದಂತಾಗುತ್ತದೆ.. ಆದರೆ ನಾವು ಅದನ್ನು ಮಾಡುವುದಿಲ್ಲ. ಸಮಸ್ಯೆಯನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತೇವೆ. ಹಾಗಾಗಿ, ಇದರ ನಡುವೆ ನಮಗೆ ಪರಿಹಾರದ ಸೂಚನೆ ಕಂಡುಬರುವುದಿಲ್ಲ.. ಕೆಲವೊಮ್ಮೆ ಸಮಸ್ಯೆಯ ಬಗ್ಗೆ ಅತಿಯಾಗಿ ಯೋಚಿಸುವುದು ಸಹ ಇನ್ನೊಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ, ಒಂದು ವಿಷಯ ಗಮನದಲ್ಲಿರಲಿ. ಪ್ರತಿ ಸಮಸ್ಯೆಗೂ ಉತ್ತರವಿರುತ್ತದೆ. ಅದನ್ನು ಹುಡುಕುವ ತಾಳ್ಮೆ ನಮ್ಮಲ್ಲಿ ಇರಬೇಕಷ್ಟೇ.
| ದೀಪಂದರ್ ಗೋಯಲ್ ಜೊಮ್ಯಾಟೋ, ಸಿಇಒ
No comments:
Post a Comment