Saturday, October 26, 2024

 ಕಥೆ-560

ಭವ್ಯ ಬದುಕು

ಮರದಲ್ಲಿ ಒಂದು ಕಾಗೆ ಇತ್ತು ಅದರ ಪುಟ್ಟ ಮರಿ ಇದೀಗ ಕಣ್ಣು ಬಿಟ್ಟಿತ್ತು. ಅದೇ ರೀತಿ ಮರದಲ್ಲಿ ಹಲವು ಬಣ್ಣ ಬಣ್ಣದ ಪಕ್ಷಿಗಳು ಹಾಡಿ ಕುಣಿಯುತ್ತಿದ್ದವು. ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದ! ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು. ಬರೀ ಕಪ್ಪು. ಮರಿಗೆ ಸಹನೆಯಾಗಲಿಲ್ಲ. ತಾಯಿಗೆ ಕೇಳಿತು, “ಅಮ್ಮಾ ಉಳಿದೆಲ್ಲ ಪಕ್ಷಿಗಳಿಗೆ ಎಂಥ ಮನೋಹರ ಬಣ್ಣ! ನಮಗೇಕೆ ಈ ಅಸಹ್ಯ ಕಪ್ಪು ಬಣ್ಣ?” ತಾಯಿ ಹೇಳಿದಳು, “ಬಣ್ಣಕ್ಕಿಂತ ಬದುಕು ಮಹತ್ವದ್ದು!” ಅದು ಹೇಗೆ?” ಮರಿ ಮತ್ತೆ ಕೇಳಿತು. ತಾಯಿ ಹೇಳಿದಳು, ‘ಬದುಕಿಗೆ ಬಣ್ಣವಿದೆ ವಿನಾ ಬಣ್ಣಕ್ಕೆ ಬದುಕಿಲ್ಲ’ ಕೋಗಿಲೆ ಹಾಡುತ್ತದೆ. ನವಿಲು ಕುಣಿಯುತ್ತದೆ. ಗಿಳಿ ಸವಿ ನುಡಿಯುತ್ತದೆ. ಮೊಲ ಓಡುತ್ತದೆ. ಬದುಕು ಇದ್ದರೆ ತಾನೇ ಈ ಹಾಡು, ಕುಣಿತ ಎಲ್ಲಾ! ಆದ್ದರಿಂದ ಬದುಕು ಮಹತ್ವದ್ದೇ ವಿನಾ ಬಣ್ಣವಲ್ಲ!” ತಾಯಿಯ ಮಾತನ್ನು ಕೇಳಿದ ಮರಿಗೆ ಸಂತಸವೇ ಸಂತಸ. ಈಗ ಮರಿಗೆ ಬದುಕಿನ ಭವ್ಯತೆಯ ಅರಿವಾಗಿತ್ತು!.

ಶ್ರೀ ಸಿದ್ಧೇಶ್ವರ ಸ್ವಾಮೀಜಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು