Wednesday, April 23, 2025

 ಕಥೆ-717

ನಕಾರಾತ್ಮಕ ಟೀಕೆಗಳಿಗೆ ಕಿವಿಗೊಡದಿರಿ


ಗುರಿಯನ್ನು ಸಕಾಲಕ್ಕೆ ತಲುಪಬೇಕೆಂದರೆ ಹಾಗೂ ಬೇಕಾದದ್ದನ್ನು ಪಡೆದುಕೊಳ್ಳಲೇಬೇಕೆಂದರೆ ಇತರರ ಅಭಿಪ್ರಾಯದ ಕುರಿತು ಚಿಂತಿಸುವುದನ್ನು ಮೊದಲು ಬಿಟ್ಟುಬಿಡಬೇಕು. ನಿಂಬೆ ಹಣ್ಣನ್ನು ಚಮಚದಲ್ಲಿ ಇಟ್ಟುಕೊಂಡು ಓಡುವ ಸ್ಪರ್ಧೆ ನಿಮಗೆ ತಿಳಿದಿರಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಓಡುವಾಗ ನಾನು ಹೇಗೆ ಕಾಣಿಸುತ್ತೇನೋ ಎಂದು ನಾಚಿಕೆಯಿಂದ ನಿಧಾನವಾಗಿ ನಡೆದರೆ ಎಲ್ಲರಿಗಿಂತ ಬೇಗ ಗುರಿ ತಲುಪಲು ಸಾಧ್ಯವೇ? ಹೀಗೆ ಎಲ್ಲ ಕೆಲಸಗಳಿಗೂ ಬೇರೆಯವರು ಏನೆಂದುಕೊಳ್ಳುತ್ತಾರೋ, ಇತರರ ದೃಷ್ಟಿಯಲ್ಲಿ ನಾವು ಹೇಗೆ ಕಾಣಿಸುತ್ತೇವೆಯೋ ಎಂದು ಯೋಚಿಸತೊಡಗಿದರೆ ಸಮಯ ಪಾಲನೆ ಇರಲಿ, ಕೆಲಸವನ್ನು ಪ್ರಾರಂಭಿಸಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಗುರಿ ಯಾವಾಗಲೂ ನಾವಂದುಕೊಂಡಿದ್ದನ್ನು ನಿಗದಿತ ಸಮಯದ ಒಳಗೆ ಯಶಸ್ವಿಯಾ! ಮುಗಿಸುವುದರ ಕಡೆಗೇ ಕೇಂದ್ರೀಕೃತವಾಗಿರಬೇಕು. ಕೆಲವೊಮ್ಮೆ ಕಾಲ ಸಿಕ್ಕಾಗಲೆಲ್ಲ ಅವಕಾಶಗಳೆಂಬ ಏಣಿಯ ಮೆಟ್ಟಿಲುಗಳನ್ನು ಏರಿದರೆ. ಮಾತ್ರ ಯಶಸ್ಸೆಂಬ ಸೂರ್ಯನೆಡೆಗೆ ಹೋಗಲು ಸಾಧ್ಯ. ಅವಕಾಶಗಳು ಹಾಗೂ ಸಮಯಕ್ಕೆ ಸರಿಯಾಗಿ ಅವುಗಳ ಸದುಪಯೋಗ ಯಾವಾಗಲೂ ಮನಸ್ಸಿನಲ್ಲಿ ಅಚ್ಚು ಒತ್ತಿರಬೇಕು. ಸಲ್ಲದ ಟೀಕೆ ಹಾಗೂ ಅಭಿಪ್ರಾಯಗಳು ಕೆಲಸದ ವೇಗವನ್ನು ತಗ್ಗಿಸುತ್ತವೆ.

ಕೃಪೆ: ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು