ಕಥೆ-719
ಕುರಿ ಕಾಯುತ್ತಲೇ UPSC ದಡ ಸೇರಿದ ಬೀರಪ್ಪ ಡೋಣಿ
ಆತನ ಇಡೀ ಕುಟುಂಬದ ವೃತ್ತಿಯೇ ಕುರಿಗಾಹಿತನ, ತಲೆತಲಾಂತರದಿಂದ ಅವರ ಕುಟುಂಬ ಕುರಿಕಾಯೋ ಕೆಲಸ ಮಾಡಿಕೊಂಡು ಬರ್ತಿದೆ. ಆ ಯುವಕನಿಗೆ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಆಸೆ ಇತ್ತು. ಕೈಯಲ್ಲಿ ಪುಸ್ತಕ ಹಿಡಿದು ಕುರಿ ಬೆನ್ನು ಹತ್ತಿದ್ದ. ಹೀಗೆ ಕಾಡು ಮೇಡಲ್ಲಿ ಸುತ್ತಾಡುತ್ತಾ ಓದಿದ ಆ ಯುವಕ ಕಡೆಗೂ 2024ರ UPSC (IAS) ಪಾಸ್ ಮಾಡಿ ಅಪ್ರತಿಮ ಸಾಧನೆ ಮಾಡಿದ್ದಾನೆ. ಅವನೇ ಬೆಳಗಾವಿಯ ನಾನಾವಾಡಿಯ ಬೀರಪ್ಪ ಡೋಣಿ.. ದೇಶದ ಅತ್ಯುನ್ನತ್ತ ಪರೀಕ್ಷೆಯಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ಬೀರಪ್ಪ ದೇಶಕ್ಕೆ 551 ನೇ Rank ಪಡೆದು ತಾನು ಕಲಿತ ಶಾಲೆ ಹಾಗೂ ತನ್ನೂರು ಹಾಗೂ ತನ್ನ ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ. ಮುಂದೆ ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಆಸೆ ಹೊಂದಿದ್ದಾನೆ. 2021 ರಿಂದ ಓದಲು ಪ್ರಾರಂಭ ಮಾಡಿದ್ದ. ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಆಗಲೇಬೇಕು ಎಂದು ಹಠ ಹಿಡಿದು ಛಲದಂಕಮಲ್ಲನ ರೀತಿ ತಯಾರಿ ನಡೆಸಿ ಕಡೆಗೂ ಯಶಸ್ವಿಯಾಗಿದ್ದಾನೆ.. ಎಷ್ಟೋ ಸಾರಿ ನಾವು ಆ ಸೌಲಭ್ಯವಿಲ್ಲ ಈ ಸೌಲಭ್ಯಗಳಿಲ್ಲ ಎಂದು ವಾದಿಸುತ್ತೇವೆ, ಕೇವಲ ಸೌಲಭ್ಯಗಳ ಹಿಂದೆ ಬೆನ್ನತ್ತೋದಲ್ಲ, ಗುರಿ ಹಿಂದೆ ಬೆನ್ನತ್ತಬೇಕು... ಪ್ರಯತ್ನವಾದಿಗಳಿಗೆ ಎಲ್ಲವೂ ಸಾಧ್ಯ...
👍💐

No comments:
Post a Comment