ಕಥೆ-730
ಜೀವನದ ಗುರಿ ಮರೆಯಬಾರದು
ಪ್ರತಿಯೊಬ್ಬರ ಜೀವನದಲ್ಲೂ ಇದು ಆಗುವಂತದ್ದೇ. ಬೆಳೆಯುವ ಹಂತದಲ್ಲಿದ್ದಾಗ, ಜತೆಯಲ್ಲಿ ಹಲವರು ಇರುತ್ತಾರೆ. ಕೆಲವೊಮ್ಮೆ ಒಬ್ಬಂಟಿಯಾಗಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಈ ನೆಗೆಟಿವಿಟಿ ಎನ್ನುವುದು ಕಟ್ಟಿಟ್ಟ ಬುತ್ತಿ. ಅದನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಎದುರಿಸುತ್ತೀವಿ ಎನ್ನುವುದು ಬಹಳ ಮುಖ್ಯ. ನೆಗೆಟಿವ್ ಅಂಶಗಳನ್ನು ನೆಗೆಟಿವ್ ಆಗಿಯೇ ತೆಗೆದುಕೊಂಡರೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಅದೇ ನೆಗೆಟಿವ್ ಅಂಶಗಳಿಂದ ಏನಾದರು ಕಲಿತರೆ, ಪಾಸಿಟಿವ್ ಆಗುತ್ತೇವೆ. ಹಾಗಾಗಿ, ಯಾರು ಎಷ್ಟೇ ಕಾಲೆಳೆಯಲಿ, ಜೀವನದಲ್ಲಿ ಏನೇ ಅವಮಾನಗಳು ಎದುರಾಗಲಿ, ಎಷ್ಟೇ ನೋವುಗಳು ಎದುರಾಗಲಿ... ಸದಾ ಆ ಗುರಿಯನ್ನು ಬೆನ್ನತ್ತುವುದಕ್ಕೆ ಪ್ರಯತ್ನ ಸಾಗಬೇಕು. ಕಂಡ ಕನಸನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕು. ಆಗ ಎಷ್ಟೇ ನೆಗೆಟಿವ್ ಅಂಶಗಳು ಎದುರಾದರೂ ವಿಚಲಿತರನ್ನಾಗಿ ಮಾಡುವುದಕ್ಕೆ ಸಾಧ್ಯವೇ ಇಲ್ಲ.
| ಕಪಿಲ್ ದೇವ್ ಕ್ರಿಕೆಟಿಗ
No comments:
Post a Comment