Thursday, July 17, 2025

 ಕಥೆ-793

ಈ ಕ್ಷಣ ಶಾಶ್ವತವಲ್ಲ


ಒಬೃ ವ್ಯಕ್ತಿ ಝನ್ ಗುರುಗಳಲ್ಲಿಗೆ ಬಂದ ಗುರೂಜಿ, ಬದುಕಿನ ಯಾವ ಯಾವ ಖುಷಿಯೂ ನನ್ನ ತಲೆಗೇರಬಾರದು. ಸದಾಕಾಲ ಸಮಚಿತ್ತದಿಂದ ಬದುಕಬೇಕೆಂದರೆ ಏನು ಮಾಡಬೇಕು?' ಎಂದು ಕೇಳಿಕೊಂಡ. ಜಂಜಾಟಗಳೂ ನನ್ನನ್ನು ತಾಕಬಾರದು.


ಆಗ ಝನ್ ಗುರು ಹೇಳಿದ-'ತುಂಬಾ ಸುಲಭ. ಒಂದೇ ಒಂದು ಮಂತ್ರವನ್ನು ನೀನು ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು', 'ಸಮಚಿತ್ರ ಗಳಿಸುವುದು ಅಷ್ಟೊಂದು ಸುಲಭವೇ? ಹಾಗಾದರೆ ಆ ಮಂತ್ರವನ್ನು ನನಗೆ ದಯಪಾಲಿಸಿ'.


'ಈ ಕ್ಷಣ ಶಾಶ್ವತವಲ್ಲ' ಎನ್ನುತ್ತಾರೆ ಝನ್ ಗುರು.


'ಈ ವಾಕ್ಯಕ್ಕೆ ಎಂಥಾ ಶಕ್ತಿಯಿದೆ ಗೊತ್ತೇ? ಸಂತೋಷದಲ್ಲಿರುವವನಿಗೆ ಎಚ್ಚರಿಕೆಯನ್ನು ದುಃಖದಲ್ಲಿರುವವನಿಗೆ ಸಮಾಧಾನವನ್ನು ಕೊಡುವ ಏಕೈಕ ವಾಕ್ಯ ಇದು. ನೀನು ಸುಖದ ಸುಪತ್ತಿಗೆಯಲ್ಲಿದ್ದಾಗ ಈ ವಾಕ್ಯವನ್ನು ಮರೆಯಬೇಡ. ಏಕೆಂದರೆ ಸಂತೋಷ ಶಾಶ್ವತವಲ್ಲ ಹಾಗೆಯೇ ಕಷ್ಟದಲ್ಲಿದ್ದಾಗ ಈ ಮಾತನ್ನು ನೆನಪು ಮಾಡಿಕೋ.ಯಾಕೆ ಗೊತ್ತೇ? ನಿನ್ನ ಕಷ್ಟಗಳೂ ಕ್ಷಣಿಕವಾದವು. ಎಲ್ಲ ಸಮಸ್ಯೆಗೂ ಪರಿಹಾರವಿರುತ್ತದೆ. ಸಮಚಿತ್ತದ ಬದುಕಿಗೆ ಇದಕ್ಕಿಂತ ಬೇರೆ ಪಾಠ ಬೇಕೇ ನಿನಗೆ?' ಬದುಕೇ ಕ್ಷಣಿಕ ಎಂದ ಮೇಲೆ ಕಷ್ಟ-ಸುಖಗಳು ಶಾಶ್ವತವೇ? ಜೀವನ ಸುಖಕರವಾಗಿದ್ದಾಗ ಅದನ್ನು ಅನುಭವಿಸಬೇಕು. ಹಾಗೆಯೇ ಕಷ್ಟಗಳು ಎದುರಾದಾಗ ಭರವಸೆ ಕಳೆದುಕೊಳ್ಳದೆ ಸಮಾಧಾನ ಹೊಂದಬೇಕು.

ಕೃಪೆ :ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು