Monday, August 18, 2025

 ಕಥೆ-832

ತಾಳ್ಮೆಯ ಪರೀಕ್ಷೆ 

ಯುರೋಪ ದೇಶದ ಅಥೆನ್ಸ್ ಪಟ್ಟಣದಲ್ಲಿ ವಾಸವಾಗಿದ್ದ ಸುಕರಾತನು(ಸಾಕ್ರಟಿಸ್) ಮಹಾಜ್ಞಾನಿ ಆದರೆ ಬಡವ, ಕುರೂಪಿ; ಅವನ ಹೃದಯ ಮಾತ್ರ ಅತಿ ಸುಂದರ. ಅವನ ಶಿಷ್ಯರೆಲ್ಲರೂ ಆಗರ್ಭ ಸಿರಿವಂತರು. ಸುಕರಾತನು ಮಾತ್ರ ಶಿಷ್ಯರಿಂದ ಏನನ್ನೂ ಬಯಸಿದವನಲ್ಲ. ಅವನ

ಉಪದೇಶ ಕೇಳಲು ತರುಣರು ಮೊದಲು ಮಾಡಿ ಎಲ್ಲರೂ ತುದಿಗಾಲಿನ ಮೇಲೆ ನಿಲ್ಲುತ್ತಿದ್ದರು. ಒಂದು ದಿನ ಸುಕರಾತನು

(ಸಾಕ್ರೆಟಿಸ್) ಶಿಷ್ಯರಿಗೆ ಉಪದೇಶ ಮಾಡುತ್ತ ಮನೆಯಲ್ಲಿ ಕುಳಿತಿದ್ದ.ಅವನ ಪತ್ನಿ ಝಾಂತಿಪಿ ಸ್ವಲ್ಪ ಮುಂಗೋಪಿ, ನಾಲ್ಕಾರು ಸಲ

ಏನೋ ಹೇಳಬೇಕೆಂದು ಪತಿಯ ಹತ್ತಿರ ಬಂದಳು. ಆದರೆ ಸುಕರಾತನು ಅವಳತ್ತ ಕಣ್ಣೆತ್ತಿಯೂ ನೋಡದೇ ಉಪದೇಶ ಮುಂದುವರಿಸಿದ. ಕೊನೆಗೆ ಝಾಂತಿಪಿಯು ಸಿಟ್ಟು ತಾಳದೆ ಮುಸುರೆಯ ನೀರನ್ನು ತಂದು ಸುಕರಾತನ ತಲೆಯ ಮೇಲೆ ಸುರಿದು ಹೋದಳು. ಆದರೂ ಸುಕರಾತನು ಅಷ್ಟೇ ಶಾಂತವಾಗಿಯೇ ಕುಳಿತಿದ್ದ. ಶಿಷ್ಯರಿಗೆಲ್ಲ ಸ್ವಲ್ಪ

ಆಶ್ಚರ್ಯವಾಗಿತ್ತು. ಗಾಬರಿಯೂ ಆಗಿತ್ತು, ಆದರೆ ಸಾವರಿಸಿಕೊಂಡು ಶಿಷ್ಯರು ಸುಕರಾತನಿಗೆ ಕೇಳಿದರು. “ನಿಮ್ಮ ಪತ್ನಿಯು ಹೀಗೆ ಮಾಡಿದರೂ ತಾವು ಶಾಂತವಾಗಿಯೇ ಕುಳಿತಿದ್ದೀರಲ್ಲ ಹೇಗೆ?” ಸುಕರಾತ ಹೇಳಿದರು. ಅವಳು ಹೀಗೆ ಮಾಡಿ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾಳೆ

ಚಿಂತನೆಗೆ ತೊಡಗಿಸುತ್ತಾಳೆ. ಈ ಸಿಟ್ಟಿಗೆ ಕಾರಣವೇನು ಅದನ್ನು ಕಳೆದುಕೊಳ್ಳುವುದು ಹೇಗೆ ಮತ್ತು ಸಿಟ್ಟು ಬರದಂತೆ ಮಾಡುವುದು

ಹೇಗೆ? ಸಿಟ್ಟು ನಿಜವಾಗಿ ಇರಬೇಕೆ, ಇರಬಾರದೆ, ಇದ್ದರೆ ಎಷ್ಟಿರಬೇಕು, ಹೇಗಿರಬೇಕು ಎಂದೆಲ್ಲ ಆಲೋಚನೆ ಮಾಡುತ್ತೇನೆ. ಇಂಥ ಹಲವಾರು ಪ್ರಸಂಗಗಳ ಮೂಲಕ ನನ್ನ ಪತ್ನಿಯೇ ನನ್ನನ್ನು ತತ್ತ್ವಜ್ಞಾನಿಯನ್ನಾಗಿ ಮಾಡಿದ್ದಾಳೆ. ಸುಕರಾತನ ಈ ಅನುಭವದ ಮೃದು ಮಧುರ

ನುಡಿಗಳನ್ನು ಕೇಳಿದ ಅವನ ಶಿಷ್ಯರು ನಿಜವಾಗಿಯೂ ನಮ್ಮ ಗುರು ಸುಕರಾತನು ಮಹಾಜ್ಞಾನಿಯಾಗಿದ್ದಾನೆಂದು ವಂದಿಸಿ ಮುನ್ನಡೆದರು.

 ಶ್ರೀ *ಸಿದ್ಧೇಶ್ವರ ಸ್ವಾಮೀಜಿ* 

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು