Friday, September 12, 2025

 ಕಥೆ-865 ಗುಣ- ಸ್ವಭಾವಗಳ ಭಿನ್ನತೆ.


ಈ ವಿಶಾಲವಾದ ಪ್ರಪಂಚದಲ್ಲಿ ನಾನಾ ಬಗೆಯ, ವಿಭಿನ್ನ ಸ್ವರೂಪ, ಗುಣ, ಸ್ವಭಾವಗಳ ಮನುಷ್ಯರೂ, ಪುರುಷರೂ, ಸ್ತ್ರೀಯರೂ, ಪಶುಗಳೂ, ಪಕ್ಷಿಗಳೂ ಇರುವುದನ್ನು ಕಾಣುತ್ತೇವೆ. ಇವುಗಳಲ್ಲಿರುವ ಭಿನ್ನತೆಗೆ, ವ್ಯತ್ಯಾಸ, ಅಂತರ, ಭೇದ-ಭಾವಗಳಿಗೆ ಏನು ಕಾರಣ ಎಂದು ಎಲ್ಲರೂ ಯೋಚಿಸುತ್ತಾರೆ. ಇದರ ಮೂಲ ಕಾರಣವನ್ನು ವಿಶ್ಲೇಷಣೆಗೊಳಪಡಿಸುವ ಸಮರ್ಥ ಗುರುವೊಬ್ಬರ ಪ್ರಸಂಗ ಅತ್ಯಂತ ಹೃದಯಸ್ಪರ್ಶಿಯಾಗಿದೆ.


ಪ್ರಾಚೀನ ಕಾಲದಲ್ಲಿ ಅಯೋಧ್ಯೆಯ ಬಳಿಯಲ್ಲಿ ಒಂದು ಗುರುಕುಲ ಇತ್ತು. ಅಲ್ಲಿ ದೇಶ-ವಿದೇಶಗಳ ಜಿಜ್ಞಾಸುಗಳಾದ ಬಾಲಕರೂ, ಯುವಕರೂ ಜ್ಞಾನಾರ್ಜನೆಗಾಗಿ ಬರುತ್ತಿದ್ದರು. ಅಲ್ಲಿಯ ಶ್ರೇಷ್ಠ ಗುರುಗಳೂ ಸುಪ್ರಸಿದ್ಧರಾಗಿದ್ದು, ಬಹು ತೀಕ್ಷ ್ಣ ಬುದ್ಧಿಮತ್ತೆಯ ಆಚಾರ್ಯರೆಂದು ವಿಖ್ಯಾತರಾಗಿದ್ದರು.


ಒಮ್ಮೆ ಈ ಆಚಾರ್ಯರ ಬಳಿ ಶಿಷ್ಯನೊಬ್ಬನು ಬಂದು ಒಂದು ಸವಾಲನ್ನು ಮಂಡಿಸಿದನು. ''ಗುರುವರ್ಯರೆ, ಈ ಪ್ರಪಂಚದಲ್ಲಿ ಅನೇಕ ತರಹದ ಜೀವಿಗಳು ಹುಟ್ಟುತ್ತಾರೆ, ಬೆಳೆಯುತ್ತಾರೆ ಮತ್ತು ಸಾಯುತ್ತಾರೆ. ಇವರು ಪ್ರಾಣಿಗಳೇ ಇರಲಿ ಅಥವಾ ಮನುಷ್ಯರೇ ಇರಲಿ, ಎಲ್ಲರೂ ಹಸಿವು, ನೋವು, ನಲಿವು, ಆನಂದ ಇತ್ಯಾದಿಗಳ ಪ್ರಯೋಗ ಮಾಡುತ್ತಾರೆ. ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ರೋಗ-ಕಾಯಿಲೆಗಳು ಬಂದರೆ ಹೋರಾಡುತ್ತಾರೆ. ಎಲ್ಲರೂ ಒಂದಲ್ಲ ಒಂದು ದಿನ ಅಳಿಯುತ್ತಾರೆ. ಇದು ಖಂಡಿತ. ಆದರೆ ಕೇವಲ ಮನುಷ್ಯರಲ್ಲಿ ಸಾಧು, ತಪಸ್ವಿ, ಜ್ಞಾನಿ, ಕಳ್ಳ, ಡಕಾಯಿತ, ದುಷ್ಟ, ಕ್ರೂರ, ಮೋಸಗಾರರಿರುತ್ತಾರೆ. ಕೇವಲ ಮನುಷ್ಯರಲ್ಲಿ ಬೇರೆ ಬೇರೆ ಜಾತಿ ಮತ್ತು ಧರ್ಮಗಳು ಇರುತ್ತವೆ. ಇದೇಕೆ ಹೀಗೆ?''


ಶಿಷ್ಯನ ಪ್ರಶ್ನೆಯನ್ನು ಕೇಳಿ ಗುರುಗಳು ಮುಗುಳು ನಗುತ್ತಾ ಹೇಳಿದರು. ''ಶಿಷ್ಯನೇ, ಬಹು ಮುಖ್ಯವಾದ ಪ್ರಶ್ನೆಯನ್ನು ಕೇಳಿದ್ದೀಯ. ಇದಕ್ಕೆ ಮೂಲ ಕಾರಣ ಮನುಷ್ಯನಲ್ಲಿರುವ ಬುದ್ಧಿ. ಈ ಬುದ್ಧಿಯಿಂದಾಗಿಯೇ ಪಶು-ಪಕ್ಷಿ, ಜೀವ-ಜಂತುಗಳಿಗೆ ಅಸಾಧ್ಯವಾದದ್ದು ಮನುಷ್ಯನಿಗೆ ಸಾಧ್ಯವಾಗಿದೆ. ಈ ಬುದ್ಧಿಯಿಂದಾಗಿಯೇ ಮನುಷ್ಯನು ಪಂಡಿತ, ಜ್ಞಾನಿ, ಕಲಾವಿದ, ತಪಸ್ವಿ, ಕಳ್ಳ, ಡಕಾಯಿತ, ಭಯೋತ್ಪಾದಕ ಆಗಬಲ್ಲ. ಮನುಷ್ಯನು ಬುದ್ಧಿಯ ಸದುಪಯೋಗ ಮಾಡಿ ಉತ್ತಮನಾಗುತ್ತಾನೆ. ದುರುಪಯೋಗ ಮಾಡಿ ನೀಚನಾಗಿ ಬಿಡುತ್ತಾನೆ,''


ಈ ಬುದ್ಧಿಯ ಸದ್ಬಳಕೆ ಮಾಡಬೇಕು. ಬುದ್ಧಿಯ ಸದುಪಯೋಗದಿಂದ ಐಕ್ಯದ ಸೂತ್ರದಲ್ಲಿ ಒಂದುಗೂಡಿಸುವ ಬದಲು, ಬೇರೆ ಬೇರೆ ಜಾತಿ, ಮತ, ಪಂಥ, ವೃತ್ತಿಗಳ ವಿವಾದಗಳಲ್ಲಿ ಸಿಲುಕಿದ್ದಾನೆ. ಮನುಷ್ಯನು ಏಕತೆಯ ಸೂತ್ರದಲ್ಲಿ ಒಂದಾಗಿ ಬದುಕನ್ನು ಸಾರ್ಥಕಗೊಳಿಸಬಹುದಿತ್ತು. ಇಂತಹ ಸಾರ್ಥಕತೆಯನ್ನು ಇತರ ಪ್ರಾಣಿಗಳು ಗಳಿಸಿದ್ದವು. ಕೇವಲ ಮಾನವನು ತನ್ನ ಬುದ್ಧಿಯ ಸದ್ಬಳಕೆಯಿಂದ ಸಾರ್ಥಕ್ಯವನ್ನು ಗಳಿಸಬಲ್ಲನು. ಎಲ್ಲರೂ ಸಾರ್ಥಕತೆ ಗಳಿಸುವಂತಾಗಲಿ.


ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆಯವರು.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು