ಕಥೆ-885
ಅಂದುಕೊಂಡಿರುವುದು ಆಗದಿದ್ದರೆ ಪರವಾಗಿಲ್ಲ
ಜೀವನದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಅದಕ್ಕೆ ತಕ್ಕಂತೆ ಕೆಲಸ ಮಾಡಬಹುದು. ಒಂದು ಹಂತದವರೆಗೆ ಎಲ್ಲವೂ ಅಂದುಕೊಂಡಂತೆ ಆಗಬಹುದು. ಆಗ ಸಹಜವಾಗಿ ಖುಷಿಯಾಗುತ್ತದೆ. ಆದರೆ, ಅಂದುಕೊಂಡಂತೆ ಆಗದಿದ್ದರೆ? ಆಗ ಏನು ಕಥೆ? ಈ ಪ್ರಶ್ನೆಗೆ ಉತ್ತರ ಎಂದರೆ, ನನ್ನ ತಂದೆ ಹೇಳಿದ ಮಾತು ಸದಾ ನೆನಪಿಗೆ ಬರುತ್ತದೆ. 'ಎಲ್ಲವೂ ಅಂದುಕೊಂಡಂತೆ ನಡೆದರೆ ಒಳ್ಳೆಯದು. ಅಕಸ್ಮಾತ್ ಅಂದುಕೊಂಡಂತೆ ನಡೆಯದಿದ್ದರೆ ಇನ್ನೂ ಒಳ್ಳೆಯದು'. ಹೀಗಾಗಬೇಕು ಎಂದು. ನಮ್ಮದೊಂದು ಕಲ್ಪನೆ ಇರುತ್ತದೆ. ಅದರಂತೆ ಎಲ್ಲವೂ ನಡೆದರೆ ಒಳ್ಳೆಯದು. ಆದರೆ ಅದರಂತೆ ನಡೆಯದೇ ಇದ್ದರೆ ಅಲ್ಲಿ ಇನ್ನೊಂದು ಯಾವುದೋ ದಿವ್ಯ ಶಕ್ತಿ ಅಲ್ಲಿ ಕೆಲಸ ಮಾಡುತ್ತಿದೆ ಎಂದರ್ಥ. ಆ ದಿವ್ಯ ಶಕ್ತಿ ಎಂದಿಗೂ ನಮಗೆ ಒಳಿತನ್ನು ಬಯಸುತ್ತದೆ. ಎಂದಿಗೂ ಕೆಡುಕಾಗಲಿ ಎಂದು ಯೋಚಿಸುವುದಿಲ್ಲ. ಆದ್ದರಿಂದ ಒಳ್ಳೆಯದೇ ಆಗುವುದರಿಂದ ಆ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಒಂದು ಅವಕಾಶ ಕೈ ತಪ್ಪಿ ಹೋದರೆ ಚಿಂತಿಸುವ ಅವಶ್ಯಕತೆ ಇಲ್ಲ. ಕೊರಗಬೇಕಾಗಿಲ್ಲ, ಏಕೆಂದರೆ, ಆ ಅವಕಾಶ ಕೈ ತಪ್ಪಿದೆ ಎಂದರೆ ಅದು ದೈವೇಚ್ಛೆ ಆಗಿರುತ್ತದೆ. ಮುಂದೆ ಅದಕ್ಕಿಂತಲೂ ಉತ್ತಮ ಅವಕಾಶ ಒದಗಿ ಬರಬಹುದು.
-ಅಮಿತಾ ಬಚ್ಚನ್
No comments:
Post a Comment