Sunday, September 7, 2025

 ಕಥೆ-859

ಚಲನೆ ಕ್ರಿಯಾಶೀಲತೆ ಬದಲಾವಣೆ 

https://basapurs.blogspot.com

ಬೆಳಿಗ್ಗೆ ಅರಳಿದ ಹೂವು ಮಧ್ಯಾಹ್ನ ಬಾಡುತ್ತದೆ. ಸಂಜೆ ನೆಲಕ್ಕೆ ಉರುಳುತ್ತದೆ, ಮರುದಿನ ಮಣ್ಣಲ್ಲಿ ಬೆರೆತು ಮರೆಯಾಗಿ ಹೋಗುತ್ತದೆ. ಹಾಗೇ ಇಂದು ಜನಿಸಿದ ಮಗು ಬೆಳೆದು ಬಾಲಕನಾಗುತ್ತಾನೆ, ಯುವಕನಾಗುತ್ತಾನೆ, ಮುದುಕನಾಗುತ್ತಾನೆ. ಕೊನೆಗೆ ಒಂದು ದಿನ,ಈ ಜಗತ್ತನ್ನೆ ತೊರೆದು, ಬಯಲಲ್ಲಿ ಬೆರೆತು, ಬಯಲಾಗಿ ಹೋಗುತ್ತಾನೆ. ಅಷ್ಟೇ ಅಲ್ಲ ಬದುಕಿರುವವರೆಗೂ ಮನೆಯಿಂದ ಮನೆಗೆ ಊರಿಂದೂರಿಗೆ ದೇಶದಿಂದ ದೇಶಕ್ಕೆ ಅಲೆದಾಡುತ್ತಲೆ ಇರುತ್ತಾನೆ. ಈ ಚಲನೆಯು

ಜೀವನದ ಸುಲಕ್ಷಣವಾಗಿದೆ. 

ನಾವಿರುವ ಈ ಭೂಮಿಯು ಸ್ಥಿರವಾಗಿರುವಂತೆ ಕಾಣುತ್ತದೆ.

ಆದರೆ ಭೂಮಿಯಿಂದ ದೂರ ಹೋಗಿ ನಿಂತು ನೋಡಿದರೆ, ಈ ಭೂಮಿಯು ತಿರುಗುವುದು ತಿಳಿಯುತ್ತದೆ. ಭೂಮಿಯು ತನ್ನ ಸುತ್ತ ತಾನೆ ತಿರುಗುವುದಲ್ಲದೆ ಸೂರ್ಯನ ಸುತ್ತಲೂ ತಿರುಗುತ್ತದೆ. ಇತಿಹಾಸವನ್ನು ತೆಗೆದು ನೋಡಿದರೆ ಮೊದಲು ಲಕ್ಷಲಕ್ಷ ವರುಷಗಳ ಹಿಂದೆ ಈ ಜಗತ್ತು ಹೀಗಿರಲಿಲ್ಲ.ಪ್ರಾರಂಭದಲ್ಲಿ ಏಕಾಣು ಜೀವಿ ಅಮೀಬಾ ಮಾತ್ರ ಇತ್ತು. ಕಣ್ಣಿಗೆ ಕಾಣದ ಕೈಗೆ ಸಿಗದ ಕೈಕಾಲು

ಕಣ್ಣು ಏನೇನೂ ಇಲ್ಲದ ಈ ಏಕಾಣು ಜೀವಿಯೇ ಬೆಳೆದು ಕೋಟ್ಯಂತರ

ವರುಷಗಳ ನಂತರ ಈಗಿರುವ ಪಶು, ಪಕ್ಷಿ, ಕ್ರಿಮಿ, ಕೀಟಾದಿಯಾಗಿ ಭವ್ಯ ಮಾನವನಾದ! ಆ ಏಕಾಣು ಜೀವಿ ಅಮೀಬಾವೇ ಬೆಳೆದು

ಹೀಗಾಯಿತೆಂದು ಯಾರಿಂದಲೂ ಕಲ್ಪಿಸಲಾಗುವುದಿಲ್ಲ!

 ಶ್ರೀ *ಸಿದ್ಧೇಶ್ವರ ಸ್ವಾಮೀಜಿ*

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು