ಕಥೆ-977
ತಪ್ಪಿನಲ್ಲೇ ಕಂಡ ವಿಜ್ಞಾನ
12ನೇ ತರಗತಿಯ ರವಿಗೆ ರಸಾಯನಶಾಸ್ತ್ರ ವಿಷಯ ತುಂಬಾ ಕಷ್ಟ. ಪ್ರಯೋಗಾಲಯಕ್ಕೆ ಹೋದಾಗ ಅವನು ಎಲ್ಲಿ ಏನು ಹಾಕಬೇಕು ಎಂಬುದೇ ಗೊಂದಲ.
ಒಂದು ದಿನ ಸರಳ “ಘನ-ದ್ರವ ಪ್ರತಿಕ್ರಿಯೆ” ನಡೆಸುವಾಗ ಅವನು ತಪ್ಪಾಗಿ ತಪ್ಪು ರಾಸಾಯನಿಕ ಬಳಸಿಬಿಟ್ಟ.
ಬೀಕರ್ನಿಂದ ನೀಲಿ ಹೊಗೆ ಹೊರಬಂದಿತು, ಮಕ್ಕಳು ಬೆದರಿಕೊಂಡರು.
ಆದರೆ ಶಿಕ್ಷಕ ಗದರಿಸದೆ ಕೇಳಿದರು:
“ಈ ತಪ್ಪ ಏನು ಕಲಿಸುತ್ತದೆ?
ರವಿ ಸ್ವಲ್ಪ ಬೆಚ್ಚಿಬಿದ್ದರೂ ಹೊತ್ತಿಗೇ ಜಾಗರೂಕನಾಗಿದ್ದ. ಗಂಟೆಗಳವರೆಗೆ ಅವನು ಆ ಪ್ರತಿಕ್ರಿಯೆಯ ಬಗ್ಗೆ ಪುಸ್ತಕ ಓದಿದ.
ಅಂದು ಅವನು ಕಲಿತದ್ದು—
ರಸಾಯನಶಾಸ್ತ್ರ ಅಂದರೆ ಬಣ್ಣಗಳ ಆಟವಲ್ಲ; ನಿಯಮಗಳ ಜಗತ್ತು....
ಮುಂದಿನ ವಾರ ಶಾಲಾ ವಿಜ್ಞಾನ ಮೇಳ ಶುರುವಾಗಿತ್ತು
ರವಿ “ಭದ್ರ ರಸಾಯನಿಕ ಮಿಶ್ರಣ” ಎಂಬ ಸರಳ ಪ್ರೊಜೆಕ್ಟ್ ಮಾಡಿದ್ದ.
ಅದರಲ್ಲಿ ತಪ್ಪು ಮಾಡಿದಾಗ ಹೇಗೆ ಅಪಾಯ ಉಂಟಾಗಬಹುದು ಮತ್ತು ತಪ್ಪನ್ನು ಹೇಗೆ ಪರೀಕ್ಷೆಯಾಗಿ ಬಳಸಬಹುದು ಎಂದು ವಿವರಿಸಿದ್ದ.
ಆ ವಿಜ್ಞಾನದಲ್ಲಿ ಅವನಿಗೆ ಫಸ್ಟ್ ಪ್ರೈಜ್ ಪ್ರಶಸ್ತಿ ಬಂದಿತ್ತು, ಅದಕ್ಕೆ ಜಡ್ಜ್ ಇದೆಲ್ಲ ಹೇಗೆ ಸಾಧ್ಯವಾಯಿತು ಎಂದ ರವಿಯನ್ನು ಕೇಳಿದಾಗ..
“ನಾನು ಮಾಡಿದ ತಪ್ಪೇ ನನ್ನ ಪ್ರೇರಣೆ. ಅದೇ ನಿಜವಾದ ವಿಜ್ಞಾನ ಎಂದಿದ್ದ..
ಆ ದಿನದಿಂದ ರವಿಗೆ ರಸಾಯನಶಾಸ್ತ್ರ ಎಂದರೆ ಭಯವಲ್ಲ ಅದೊಂದು ಗೌರವ ಎಂದುಕೊಂಡ... ಮುಂದೆ ಅದರಲ್ಲಿಯೇ PhD ಮಾಡಿದ...
ತಪ್ಪು ಮಾಡೋದು ಸಹಜ, ಆ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಹೇಗೆ? ತಪ್ಪುಗಳಿಂದ ಪಾಠ ಕಲಿಯೋದು ನಿಜವಾದ ಸಾಧನೆ ಅಲ್ಲವೇ..
-ಶಂಕರಗೌಡ ಬಸಾಪೂರ
No comments:
Post a Comment