ಕಥೆ-1002
ಭಾವವು ಭವ್ಯ & ದಿವ್ಯವಾಗುತ್ತದೆ.
ಒಂದು ಪಾತರಗಿತ್ತಿ ಅರಳಿದ ಕಮಲದ ಸುವಾಸನೆ ಜಾಡನ್ನು ಹಿಡಿದು ನಡೆದಿತ್ತು. ಮಧ್ಯದಲ್ಲಿ ಒಂದು ಕಪ್ಪೆಯು ಭೇಟಿಯಾಗಿ ಕೇಳಿತು “ಗೆಳೆಯ ನೀನು ಇಷ್ಟೊಂದು ವೇಗವಾಗಿ ಎಲ್ಲಿಗೆ ಹೊರಟಿರುವಿ?”ಪಾತರಗಿತ್ತಿ- “ಗೆಳೆಯ, ನೀನು ಇರುವಲ್ಲಿಯೇ” ಆಶ್ಚರ್ಯ ಅಲ್ಲೇನಿದೆ? ಕಮಲದ ಹೂವೊಂದು ಅರಳಿ ನಗುತಲಿದೆ, ಮಕರಂದ ತುಂಬಿ ಸೂಸುತಿದೆ. ಕಪ್ಪೆಗೆ ಆಶ್ಚರ್ಯವೇ ಆಶ್ಚರ್ಯ ! ಆನಂದವೇ ಆನಂದ!! ಕಪ್ಪೆ ಅಂದುಕೊಂಡಿತು ಎಂತ ವಿಚಿತ್ರ ನಾನು ಪಕ್ಕದಲ್ಲಿ ಇದ್ದ ಕಮಲದ ಸುವಾಸನೆಯನ್ನು ಗುರುತಿಸಲಾಗಲಿಲ್ಲ...
ಪಾತರಗಿತ್ತಿಯಂತೆ ಸಂತರ ಸಹವಾಸ ಹುಡುಕಿಕೊಂಡು ಹೋಗುವ ಸಾಧಕನು ನಿತ್ಯ ಸುಖಿಯಾಗುತ್ತಾನೆ. ಪರಮಾನಂದ ಪಡೆಯುತ್ತಾನೆ. ಹೀಗೆ ಸಂತ ಗುರು ಹಿರಿಯರು ವಸಂತರೂಪದಲ್ಲಿ ನಮ್ಮ ಬಳಿ ಸುಳಿದಾಗ ನಮ್ಮ ಭಾವ ಭವ್ಯ- ದಿವ್ಯವಾಗುತ್ತದೆ. ಗೊತ್ತಿಲ್ಲದೆ ನಮ್ಮ ಜೀವನ ಸುಖಕರವಾಗಿರುತ್ತದೆ..
- ಶ್ರೀ ಸಿದ್ಧೇಶ್ವರ ಸ್ವಾಮೀಜಿ
No comments:
Post a Comment