ಕಥೆ-1018
ವಿಶ್ವಾಸ ಮರಳಿ ಪಡೆಯುವುದು ಬಹಳ ಕಷ್ಟ...
ಒಂದು ಊರಲ್ಲಿ ಮೂವರು ಸ್ನೇಹಿತರಿದ್ದರು. ಒಬ್ಬನ ಹೆಸರು ಜ್ಞಾನ, ಇನ್ನೊಬ್ಬ ಧನ, ಮತ್ತೊಬ್ಬ ವಿಶ್ವಾಸ. ಈ ಮೂವರು ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ. ಆದರೆ, ಒಂದು ಸಾರಿ ಅವರು ಬೇರೆ ಬೇರೆ ಆಗುವ ಸಮಯ ಬಂದಿತು. ಆದರೆ ನಾವು ಮತ್ತೆ ಭೇಟಿಯಾಗುವುದು ಹೇಗೆ ಎಂದು ಚಿಂತಿಸಬೇಕಾದರೆ ಆಗ ಜ್ಞಾನ ಹೇಳಿದ ನಾನು ಮಠ - ಮಂದಿರಗಳಲ್ಲಿ ಹಾಗೂ ಸಾಧು - ಸಂತರು. ಹೆಚ್ಚು ಓದಿದವರ ಜೊತೆ ಇರುತ್ತೇನೆ ಎಂದ. ಆಗ ಧನ ನಾನು ಅಘರ್ಭ ಶ್ರೀಮಂತನ ಹತ್ತಿರ ಇರುತ್ತೇನೆ ಎಂದ. ಇವರ ಮಾತು ಕೇಳಿ ಕಣ್ಣೀರು ಹಾಕುತ್ತಾ ವಿಶ್ವಾಸ ಹೇಳಿದ ನಾನು ಒಂದು ಸಾರಿ ಹೋದರೆ ಮರಳಿ ಬರುವುದಿಲ್ಲ ಎಂದು.
ಹೌದಲ್ಲವೇ ಜ್ಞಾನವನ್ನು ಪಡೆಯಬಹುದು ಧನವನ್ನು ಮರಳಿ ಪಡೆಯಬಹುದು ಆದರೆ ಕಳೆದುಕೊಂಡ ವಿಶ್ವಾಸ ಮರಳಿ ಪಡೆಯುವುದು ಬಹಳ ಕಷ್ಟ...
-Prakash
No comments:
Post a Comment