Friday, January 30, 2026

 ಕಥೆ-1021

ಮುಗುಳ್ನಗೆಯೇ ಸಕಾರಾತ್ಮಕತೆಯ ಕುರುಹು....


ನಿಜವಾಗಿ ಹೇಳಬೇಕೆಂದರೆ ನಾವು ಹೊರುವ ಅತಿ ಭಾರವಾದ ಹೊರೆಯೇ ನಕಾರಾತ್ಮಕ ಚಿಂತನೆ. ಸಾಧ್ಯವಿಲ್ಲ, ಕಷ್ಟ, ನನಗೆಲ್ಲಿ ಆಗುತ್ತೆ.. ಈ ಪದಗಳು ಏಕಾಏಕಿ ನಮ್ಮಸುಪ್ತಮನಸ್ಸಿನೊಳಗಿಳಿಯುವ ವಿಷ. ಕುಳಿತವನು ಏಳಲಾಗುವುದೇ ಇಲ್ಲ ಎಂದು ಕುಳಿತಲ್ಲೇ ಕೂತು 'ನಕಾರಾತ್ಮಕತೆಯನ್ನು ಭಜಿಸಿದರೆ ಕೊಳೆತು ಹೋಗುತ್ತಾನೆಯೇ ಹೊರತು, ನಿಂತು ನಡೆಯಲಾರ. 

     ಒಮ್ಮೆ ನಕಾರಾತ್ಮಕದ ಕೆಸರು ನಮ್ಮೊಳಗೆ ತುಂಬಿಕೊಂಡಿತೆಂದರೆ ನಮ್ಮ ಶಕ್ತಿ, ಉಲ್ಲಾಸವನ್ನೆಲ್ಲಾ ಗೊಬ್ಬರ ಮಾಡಿಬಿಡುತ್ತದೆ. ಜೊತೆಗೆ ಇದರ ಹೊರೆ ಅದೆಷ್ಟಿರುತ್ತದೆಂದರೆ, ಯಾವುದೇ ಕೆಲಸದ ಮುನ್ನ ನಮ್ಮನ್ನು ಹಗ್ಗ ಹಾಕಿ ಕಟ್ಟುತ್ತದೆ. ನಾಲಿಗೆಯಲ್ಲಿ ಆಗುವುದಿಲ್ಲವೆಂದು ಹೇಳು ಎಂದು ಹಿಂಸಿಸುತ್ತದೆ. ಕಣ್ಣಿನಲ್ಲಿ ತುಂಬಿಕೊಂಡ ಕನಸುಗಳಿಗೆ ಮಸಿ ಬಳಿಯುತ್ತದೆ. ಒಟ್ಟಾರೆ ಮುಂದಡಿ ಇಡಲು ನಾನಾ ಭಯಗಳನ್ನು ತುಂಬಿ ಆತ್ಮವಿಶ್ವಾಸದ ಟ್ಯಾಂಕನ್ನು ಖಾಲಿ ಮಾಡಿಬಿಡುತ್ತದೆ. ನನಗೆ ಸಾಧ್ಯ, ಮುಂದೇನಾಗುವುದೋ ಆಗಲಿ ಎಂದು ಆ ಹೊರೆಯನ್ನು ದೂಡಿ ಮುಂದಡಿ ಇಟ್ಟಾಗ ಬಾಗಿಲುಗಳು ತೆರೆಯುತ್ತವೆ, ಅವಕಾಶಗಳು ಕೈಬೀಸುತ್ತವೆ. ತುಟಿಯಂಚಿನಲ್ಲಿ ನಗೆಯ ಬುಗ್ಗೆ ಪುಟಿದೇಳುತ್ತದೆ. ಮತ್ತಿನ್ಯಾಕೆ ಈ ಹೊರೆ .... ನಮ್ಮ ಇಂಧನವನ್ನು ಸಕಾರಾತ್ಮಕವಾಗಿ ಬಳಿಸಿ. 


ಮುಗುಳ್ನಗೆಯೇ ಸಕಾರಾತ್ಮಕತೆಯ ಕುರುಹು....

-ವಸು ವತ್ಸಲೆ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು